ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ಅಂಕಿತ ಬಿದ್ದ ದಿನದಿಂದಲೇ ಕಾನೂನು ಜಾರಿ ಆಗಿದೆ. ಆದರೆ, ಇದಕ್ಕೊಂದು ಆದೇಶ ಹೊರಡಿಸುವಂತೆ ಸಬ್ ರಿಜಿಸ್ಟ್ರಾರ್ಗಳು ಕೋರಿಕೆ ಸಲ್ಲಿಸಿದ್ದರು. ಆದ್ದರಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.