‘ಸೈನಿಕರಿಗೆ ಗೌರವಾರ್ಪಣೆ ಹಾಗೂ ಸಮಾನತೆ ಸಾರುವುದು ನನ್ನ ಯಾತ್ರೆಯ ಉದ್ದೇಶ. ತಮಿಳುನಾಡು, ಆಂಧ್ರಪ್ರದೇಶದ ಮೂಲಕ ಈಶಾನ್ಯ ರಾಜ್ಯಗಳಿಗೆ ತೆರಳಿದೆ. ಚೀನಾ ಗಡಿಯಲ್ಲಿರುವ ತವಾಂಗ್ನಲ್ಲಿ ಸಂಚಾರ ಕೊನೆಗೊಳಿಸಲು ಉದ್ದೇಶಿಸಿದ್ದೆ. ಏ.9ರಂದು ಅಲ್ಲಿಂದ ಮತ್ತೆ ಸಂಚಾರ ಮುಂದುವರಿಸಿ ನೇಪಾಳ, ಬರ್ಮಾ ದೇಶಗಳಿಗೂ ಭೇಟಿ ನೀಡಿದ್ದೇನೆ. ಉತ್ತರ ಪ್ರದೇಶದಲ್ಲಿ ಬೈಕ್ಗೆ ಹಿಂಬದಿಯಿಂದ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಕೆಟಿಎಂ ಬೈಕ್ ಸಂಪೂರ್ಣ ಜಖಂಗೊಂಡಿತು. ಚಿಕಿತ್ಸೆ ಹಾಗೂ ಒಂದು ತಿಂಗಳು ವಿಶ್ರಾಂತಿ ಪಡೆದು, ನಂತರ ಬಿಎಂಡಬ್ಲ್ಯು ಬೈಕ್ನಲ್ಲಿ ಸವಾರಿ ಮುಂದುವರಿಸಿದೆ. ಲಡಾಕ್, ಪಂಜಾಬ್, ರಾಜಸ್ಥಾನ ಪ್ರವಾಸ ಮುಗಿಸಿಕೊಂಡು ಕರ್ನಾಟಕಕ್ಕೆ ಬಂದಿದ್ದೇನೆ’ ಎಂದರು.