‘ಪ್ರಕಾಶ್ ಬಳಿ ಕೆಲಸ ಮಾಡುತ್ತಿರುವಾಗಲೇ ಕಾರಿನ ಮತ್ತೊಂದು ಕೀಲಿಯನ್ನು ಕದ್ದು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿ, ಅದೇ ಕೀಲಿ ಬಳಸಿ ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಕದ್ದಿದ್ದ. ಈ ಬಗ್ಗೆ ಮಾಲೀಕರು ದೂರು ದಾಖಲಿಸಿದ್ದರು. ಈ ಕೃತ್ಯದಲ್ಲಿ ಚೇತನ್ ಭಾಗಿಯಾಗಿರುವ ಅನುಮಾನ ಇತ್ತು. ಆತನಿಗೆ ಕರೆ ಮಾಡಿದಾಗಲೆಲ್ಲಾ ಒಮ್ಮೊಮ್ಮೆ ಒಂದೊಂದು ಊರಿನಲ್ಲಿರುವುದಾಗಿ ತಿಳಿಸುತ್ತಿದ್ದ. ಆತನ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಪುಣೆಯಲ್ಲಿ ಇರುವುದು ಗೊತ್ತಾಗಿತ್ತು. ಅಲ್ಲಿ ಆತನನ್ನು ಬಂಧಿಸಿ, ಕಾರು ಜಪ್ತಿ ಮಾಡಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.