ಈ ಧ್ವನಿ ಮುದ್ರಣ ತುಳು ಭಾಷೆಯಲ್ಲಿದೆ. ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂದು ಹೇಳಿದ ವ್ಯಕ್ತಿಗೆ, ಸದಾನಂದ ಗೌಡರು, ‘ನಾವು ಕೇಂದ್ರದಿಂದ ಕೊಡುವುದನ್ನೆಲ್ಲ ಕೊಟ್ಟಿದ್ದೇವೆ. ನಿಮ್ಮ ರಾಜ್ಯದ ಅಧ್ಯಕ್ಷರನ್ನು ಕೇಳಿ. ನಾವು ಕೇಂದ್ರದಿಂದ ಕೊಟ್ಟಿದ್ದನ್ನು ನೀವು ಜನರಿಗೆ ಕೊಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ನಾವು ಕೇಳಿದ್ದಕ್ಕಿಂತ ಹೆಚ್ಚೇ ಕೊಟ್ಟಿದ್ದೇವೆ. ರಾಜ್ಯದಲ್ಲಿ ಸಮಸ್ಯೆ ಇದ್ದರೆ, ಅವರು ಸರಿ ಮಾಡಲಿ, ನಾವು ಮಾಡುವುದಲ್ಲ. ನಿಮ್ಮಲ್ಲಿ ಎಂಎಲ್ಎ, ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರಲ್ಲ, ಹಾಗಾದ್ರೆ ಅವರೆಲ್ಲ ಯಾಕೆ ಇರುವುದು? ನೀವು ಅವರಲ್ಲಿ ಕೇಳದೇ ನಮ್ಮಲ್ಲಿ ಏನು ಕೇಳುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.