ಬಾಗಲಕೋಟೆ: ‘ಬಿಎಸ್ಸಿ ಓದಲು ನಮ್ಮೂರ ಸಮೀಪದ ಟಿ.ಬೇಕುಪ್ಪೆಯ ಯೂನಿಯನ್ ಬ್ಯಾಂಕ್ನಲ್ಲಿ ₹2.40 ಲಕ್ಷ ಶಿಕ್ಷಣ ಸಾಲ ಸಿಕ್ಕಿತ್ತು. ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿಗೆ ಸೀಟ್ ಸಿಕ್ಕಿದೆ. ಮತ್ತೆ ಸಾಲಕ್ಕೆ ಅರ್ಜಿ ಹಾಕಿದ್ದೇನೆ. ಈ ಚಿನ್ನದ ಪದಕಗಳು ಮುಂದಿನ ಓದಿಗೆ ಸಾಲ ಸಿಗುವ ವಿಶ್ವಾಸ ಹೆಚ್ಚಿಸಿವೆ’ ಎಂದು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕುನೂರಿನ ವಿ.ಪ್ರಶಾಂತ್ ಹೇಳಿದಾಗ, ಪಕ್ಕದಲ್ಲಿಯೇ ನಿಂತಿದ್ದ ಅಮ್ಮ ವಸಂತಾ ಮೆಚ್ಚುಗೆಯಿಂದ ಮಗನ ಗಲ್ಲ ಹಿಂಡಿದರು.