ಆರೋಪಿಯು ಪಿ.ಯು. ವಿದ್ಯಾರ್ಥಿನಿಯಾದ ಸಂತ್ರಸ್ಥೆಯನ್ನು ಪುಸಲಾಯಿಸಿ ಲೇಔಟ್ ಒಂದರ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದ. ಇದರಿಂದ ಆಕೆ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದಳು. ಇದರಿಂದ ಬೆದರಿದ ಆರೋಪಿಯು ಸಂತ್ರಸ್ಥೆಯ ತಂದೆಗೆ ಕರೆ ಮಾಡಿ, ನಿಮ್ಮ ಮಗಳು ಇದ್ದಕ್ಕಿದ್ದ ಹಾಗೇ ಅಸ್ತಸ್ಥಗೊಂಡಿದ್ದು, ಪ್ರಜ್ಞೆ ಸಹ ಇಲ್ಲ ಎಂದು ಕಥೆ ಕಟ್ಟಿದ್ದ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ತಂದೆ ಮನವಿ ಮಾಡಿದ್ದರು. ನಂತರ ಆರೋಪಿಯು ಬಾಲಕಿಯನ್ನು ಅಗರ, ತಾತಗುಣಿ ಮೊದಲಾದ ಕಡೆಗಳಲ್ಲಿನ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯರು ಸಿಕ್ಕಿರಲಿಲ್ಲ. ಬಯ್ಯನಪಾಳ್ಯದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದ ವೇಳೆ, ಸಂತ್ರಸ್ಥೆಯನ್ನು ಪರೀಕ್ಷಿಸಿದ್ದ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.