ಡಿ.15ರಂದು ವಿಧಾನ ಪರಿಷತ್ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ನಿಯಮಬಾಹಿರ ಮತ್ತು ಕಾನೂನುಬಾಹಿರ ವರ್ತನೆಯ ಅಂಶಗಳ ಕುರಿತು ಪರಿಶೀಲಿಸಬೇಕು. ಘಟನೆಗೆ ಕಾರಣವಾದ ಪರಿಷತ್ ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಸದಸ್ಯರು, ಸಚಿವರು ಮತ್ತು ಇತರರ ಬಗ್ಗೆ ಪರಿಶೀಲಿಸಬೇಕು. ಘಟನೆಯ ಕುರಿತು ಪರಿಶೀಲನೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸಲ್ಲಿಸಿರುವ ದೂರುಗಳು ಹಾಗೂ ಡಿ.15ರಿಂದ ಸದನ ಸಮಿತಿ ರಚಿಸುವವರೆಗೆ ಸಭಾಪತಿ ಪೀಠ ಮತ್ತು ಸದನದ ಗೌರಕ್ಕೆ ಚ್ಯುತಿ ತರುವಂತೆ ನಡೆದಿರುವ ಎಲ್ಲ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.