<p class="Briefhead"><em><strong>‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಕೋವಿಡ್–19 ಪರಿಹಾರ ನಿಧಿ’ಯಡಿ ಸಂಗ್ರಹವಾಗಿರುವ ದೇಣಿಗೆಯಲ್ಲಿ ಈಗಾಗಲೇ 18 ಎನ್ಜಿಒಗಳಿಗೆ ತಲಾ ₹5 ಲಕ್ಷ ನೆರವು ನೀಡಿದ್ದೇವೆ. ಹೊಸದಾಗಿ ಮತ್ತೆ ಮೂರು ಎನ್ಜಿಒಗಳಿಗೆ ತಲಾ ₹ 5 ಲಕ್ಷ ನೆರವು ನೀಡಲಾಗುತ್ತಿದೆ. ಇದಲ್ಲದೆ ಉಳಿದಿರುವ ಮೊತ್ತವನ್ನು ಎಲ್ಲ 21 ಸಂಸ್ಥೆಗಳಿಗೆ ಸಮಾನವಾಗಿ ಹಂಚಲಿದ್ದೇವೆ.</strong></em></p>.<p class="Briefhead">***</p>.<p class="Briefhead"><strong>ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್</strong></p>.<p>ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ‘ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್’ (ಎಸ್ವಿವೈಎಂ), ಸಮುದಾಯವನ್ನು ತಳಮಟ್ಟದಲ್ಲಿ ಅಭಿವೃದ್ಧಿಪಡಿಸುವ ಸಂಸ್ಥೆ. ಇದು ಬುಡಕಟ್ಟು ಮತ್ತು ಇತರ ಅಲಕ್ಷಿತ ಸಮುದಾಯದವರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಜನರ ಆರೋಗ್ಯ, ಶಿಕ್ಷಣ, ಸಾಮಾಜಿಕ, ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಸ್ಥಳೀಯ, ಹೊಸಬಗೆಯ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪರಿಹಾರಗಳನ್ನು ಬಳಸಿಕೊಂಡು ಈ ಜನರ ಪ್ರಗತಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.</p>.<p>ಕೋವಿಡ್–19ರ ಪೀಡಿತ ಕುಟುಂಬಗಳ ಜೀವನವನ್ನು ಸರಿದೂಗಿಸುವ ಗುರಿಯನ್ನು ಎಸ್ವಿವೈಎಂ ಹೊಂದಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ<br />ವೃತ್ತಿಪರ ತರಬೇತಿ ಕೋರ್ಸ್ಗಳನ್ನು ನಡೆಸಲು ಯೋಜಿಸಿದೆ. ಕೃಷಿ ಆಧಾರಿತ ತರಬೇತಿ (ಹೈನುಗಾರಿಕೆ, ಜೇನು ಕೃಷಿ, ರೇಷ್ಮೆ), ಉದ್ಯಮಶೀಲತಾ ಅಭಿವೃದ್ಧಿ, ಫ್ಯಾಷನ್ ಡಿಸೈನಿಂಗ್, ಬ್ಯೂಟಿಷಿಯನ್ ಕೋರ್ಸ್ಗಳು, ಕಂಪ್ಯೂಟರ್ ತರಬೇತಿ, ಎಲೆಕ್ಟ್ರೀಷಿಯನ್ ಮತ್ತು ಪ್ಲಂಬಿಂಗ್ ವಿಷಯಗಳಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದೆ.</p>.<p class="Briefhead"><strong>ಯೂತ್ ಫಾರ್ ಸೇವಾ</strong></p>.<p>ಬೆಂಗಳೂರು ಬಿಟ್ಟು ಉಳಿದೆಡೆ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿರುವ ‘ಯೂತ್ ಫಾರ್ ಸೇವಾ’, ರಾಷ್ಟ್ರವ್ಯಾಪಿ ಸ್ವಯಂ ಸೇವಕರನ್ನು ಹೊಂದಿರುವ ಸಂಸ್ಥೆ. ಸ್ವಯಂ ಸೇವಕರ ಮೂಲಕವೇ ಬದಲಾವಣೆ ತರುವ ಗುರಿಯನ್ನು ಇದು ಹೊಂದಿದೆ.</p>.<p>ಸಮಾಜದಲ್ಲಿನ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು 2009ರಲ್ಲಿ ‘ವಿದ್ಯಾ ಚೇತನಾ’ ಕಾರ್ಯಕ್ರಮವನ್ನು ಸಂಸ್ಥೆ ಅರಂಭಿಸಿತು. ಇದರಡಿ ಇಲ್ಲಿಯವರೆಗೆ ಸುಮಾರು 5,000 ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ.</p>.<p>ಇದೀಗ ‘ವಿದ್ಯಾ ಚೇತನಾ– ಆಲಂಬನ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೋವಿಡ್–19ರಿಂದ ಒಬ್ಬರು ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ನಾಲ್ಕು ಸಾವಿರ ಮಕ್ಕಳಿಗೆ ನೆರವು ನೀಡುವ ಗುರಿ ಹೊಂದಿರುವ ಈ ಕಾರ್ಯಕ್ರಮಕ್ಕೆ ಇಲ್ಲಿಯವರೆಗೆ 2,500 ಮಕ್ಕಳನ್ನು ಗುರುತಿಸಲಾಗಿದೆ.</p>.<p class="Briefhead"><strong>ದಿ ಸೊಸೈಟಿ ಫಾರ್ ಎಂಪವರ್ಮೆಂಟ್ ಥ್ರೂ ವಾಲೆಂಟರಿ ಆಕ್ಷನ್ ಇನ್ ಕರ್ನಾಟಕ (ಸೇವಕ್)</strong></p>.<p>ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ದಿ ಸೊಸೈಟಿ ಫಾರ್ ಎಂಪವರ್ಮೆಂಟ್ ಥ್ರೂ ವಾಲೆಂಟರಿ ಆಕ್ಷನ್ ಇನ್ ಕರ್ನಾಟಕ’ (ಎಸ್ಇವಿಎಕೆ–ಸೇವಕ್) ಸಮುದಾಯ ಆಧಾರಿತ ಸಂಸ್ಥೆಗಳನ್ನು ರೂಪಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.</p>.<p>ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ ಚಟುವಟಿಕೆಗಳನ್ನು ಕೈಗೊಂಡಿದೆ. ಅಲ್ಲದೆ ಈ ಜನರಿಗೆ ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದೆ.</p>.<p>ಕೋವಿಡ್ ಪಿಡುಗಿನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸುವ ಉದ್ದೇಶ<br />ದಿಂದ ‘ಸೇವಕ್’ ಅಲಕ್ಷಿತ ಸಮುದಾಯಗಳ ಕುಟುಂಬಗಳನ್ನು ಗುರುತಿಸಿದೆ. ದೇವದಾಸಿಯರ ಕುಟುಂಬಗಳು, ಮನೆ ಕೆಲಸಗಾರರು, ಮಹಿಳೆಯರ ನೇತೃತ್ವದ ಕುಟುಂಬಗಳು ಮತ್ತು ಪ್ರಬುದ್ಧರಾಗುವ ಮೊದಲೇ ವಿವಾಹವಾದವರಿಗೆ ನೆರವಾಗುತ್ತಿದೆ. ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಈ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಅವರ ಆದಾಯ ವೃದ್ಧಿಗೆ ನೆರವಾಗುವ ಗುರಿಯನ್ನು ಹೊಂದಿದೆ. ಇದಲ್ಲದೆ, ಕೋವಿಡ್ ಲಸಿಕೆಯ ಅಭಿಯಾನದಲ್ಲಿ ಇದು ಬೆಳಗಾವಿ ಜಿಲ್ಲೆಯ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈ ಮೂಲಕ ಕೋವಿಡ್ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><em><strong>‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಕೋವಿಡ್–19 ಪರಿಹಾರ ನಿಧಿ’ಯಡಿ ಸಂಗ್ರಹವಾಗಿರುವ ದೇಣಿಗೆಯಲ್ಲಿ ಈಗಾಗಲೇ 18 ಎನ್ಜಿಒಗಳಿಗೆ ತಲಾ ₹5 ಲಕ್ಷ ನೆರವು ನೀಡಿದ್ದೇವೆ. ಹೊಸದಾಗಿ ಮತ್ತೆ ಮೂರು ಎನ್ಜಿಒಗಳಿಗೆ ತಲಾ ₹ 5 ಲಕ್ಷ ನೆರವು ನೀಡಲಾಗುತ್ತಿದೆ. ಇದಲ್ಲದೆ ಉಳಿದಿರುವ ಮೊತ್ತವನ್ನು ಎಲ್ಲ 21 ಸಂಸ್ಥೆಗಳಿಗೆ ಸಮಾನವಾಗಿ ಹಂಚಲಿದ್ದೇವೆ.</strong></em></p>.<p class="Briefhead">***</p>.<p class="Briefhead"><strong>ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್</strong></p>.<p>ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ‘ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್’ (ಎಸ್ವಿವೈಎಂ), ಸಮುದಾಯವನ್ನು ತಳಮಟ್ಟದಲ್ಲಿ ಅಭಿವೃದ್ಧಿಪಡಿಸುವ ಸಂಸ್ಥೆ. ಇದು ಬುಡಕಟ್ಟು ಮತ್ತು ಇತರ ಅಲಕ್ಷಿತ ಸಮುದಾಯದವರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಜನರ ಆರೋಗ್ಯ, ಶಿಕ್ಷಣ, ಸಾಮಾಜಿಕ, ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಸ್ಥಳೀಯ, ಹೊಸಬಗೆಯ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪರಿಹಾರಗಳನ್ನು ಬಳಸಿಕೊಂಡು ಈ ಜನರ ಪ್ರಗತಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.</p>.<p>ಕೋವಿಡ್–19ರ ಪೀಡಿತ ಕುಟುಂಬಗಳ ಜೀವನವನ್ನು ಸರಿದೂಗಿಸುವ ಗುರಿಯನ್ನು ಎಸ್ವಿವೈಎಂ ಹೊಂದಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ<br />ವೃತ್ತಿಪರ ತರಬೇತಿ ಕೋರ್ಸ್ಗಳನ್ನು ನಡೆಸಲು ಯೋಜಿಸಿದೆ. ಕೃಷಿ ಆಧಾರಿತ ತರಬೇತಿ (ಹೈನುಗಾರಿಕೆ, ಜೇನು ಕೃಷಿ, ರೇಷ್ಮೆ), ಉದ್ಯಮಶೀಲತಾ ಅಭಿವೃದ್ಧಿ, ಫ್ಯಾಷನ್ ಡಿಸೈನಿಂಗ್, ಬ್ಯೂಟಿಷಿಯನ್ ಕೋರ್ಸ್ಗಳು, ಕಂಪ್ಯೂಟರ್ ತರಬೇತಿ, ಎಲೆಕ್ಟ್ರೀಷಿಯನ್ ಮತ್ತು ಪ್ಲಂಬಿಂಗ್ ವಿಷಯಗಳಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದೆ.</p>.<p class="Briefhead"><strong>ಯೂತ್ ಫಾರ್ ಸೇವಾ</strong></p>.<p>ಬೆಂಗಳೂರು ಬಿಟ್ಟು ಉಳಿದೆಡೆ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿರುವ ‘ಯೂತ್ ಫಾರ್ ಸೇವಾ’, ರಾಷ್ಟ್ರವ್ಯಾಪಿ ಸ್ವಯಂ ಸೇವಕರನ್ನು ಹೊಂದಿರುವ ಸಂಸ್ಥೆ. ಸ್ವಯಂ ಸೇವಕರ ಮೂಲಕವೇ ಬದಲಾವಣೆ ತರುವ ಗುರಿಯನ್ನು ಇದು ಹೊಂದಿದೆ.</p>.<p>ಸಮಾಜದಲ್ಲಿನ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು 2009ರಲ್ಲಿ ‘ವಿದ್ಯಾ ಚೇತನಾ’ ಕಾರ್ಯಕ್ರಮವನ್ನು ಸಂಸ್ಥೆ ಅರಂಭಿಸಿತು. ಇದರಡಿ ಇಲ್ಲಿಯವರೆಗೆ ಸುಮಾರು 5,000 ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ.</p>.<p>ಇದೀಗ ‘ವಿದ್ಯಾ ಚೇತನಾ– ಆಲಂಬನ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೋವಿಡ್–19ರಿಂದ ಒಬ್ಬರು ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ನಾಲ್ಕು ಸಾವಿರ ಮಕ್ಕಳಿಗೆ ನೆರವು ನೀಡುವ ಗುರಿ ಹೊಂದಿರುವ ಈ ಕಾರ್ಯಕ್ರಮಕ್ಕೆ ಇಲ್ಲಿಯವರೆಗೆ 2,500 ಮಕ್ಕಳನ್ನು ಗುರುತಿಸಲಾಗಿದೆ.</p>.<p class="Briefhead"><strong>ದಿ ಸೊಸೈಟಿ ಫಾರ್ ಎಂಪವರ್ಮೆಂಟ್ ಥ್ರೂ ವಾಲೆಂಟರಿ ಆಕ್ಷನ್ ಇನ್ ಕರ್ನಾಟಕ (ಸೇವಕ್)</strong></p>.<p>ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ದಿ ಸೊಸೈಟಿ ಫಾರ್ ಎಂಪವರ್ಮೆಂಟ್ ಥ್ರೂ ವಾಲೆಂಟರಿ ಆಕ್ಷನ್ ಇನ್ ಕರ್ನಾಟಕ’ (ಎಸ್ಇವಿಎಕೆ–ಸೇವಕ್) ಸಮುದಾಯ ಆಧಾರಿತ ಸಂಸ್ಥೆಗಳನ್ನು ರೂಪಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.</p>.<p>ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ ಚಟುವಟಿಕೆಗಳನ್ನು ಕೈಗೊಂಡಿದೆ. ಅಲ್ಲದೆ ಈ ಜನರಿಗೆ ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದೆ.</p>.<p>ಕೋವಿಡ್ ಪಿಡುಗಿನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸುವ ಉದ್ದೇಶ<br />ದಿಂದ ‘ಸೇವಕ್’ ಅಲಕ್ಷಿತ ಸಮುದಾಯಗಳ ಕುಟುಂಬಗಳನ್ನು ಗುರುತಿಸಿದೆ. ದೇವದಾಸಿಯರ ಕುಟುಂಬಗಳು, ಮನೆ ಕೆಲಸಗಾರರು, ಮಹಿಳೆಯರ ನೇತೃತ್ವದ ಕುಟುಂಬಗಳು ಮತ್ತು ಪ್ರಬುದ್ಧರಾಗುವ ಮೊದಲೇ ವಿವಾಹವಾದವರಿಗೆ ನೆರವಾಗುತ್ತಿದೆ. ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಈ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಅವರ ಆದಾಯ ವೃದ್ಧಿಗೆ ನೆರವಾಗುವ ಗುರಿಯನ್ನು ಹೊಂದಿದೆ. ಇದಲ್ಲದೆ, ಕೋವಿಡ್ ಲಸಿಕೆಯ ಅಭಿಯಾನದಲ್ಲಿ ಇದು ಬೆಳಗಾವಿ ಜಿಲ್ಲೆಯ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈ ಮೂಲಕ ಕೋವಿಡ್ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>