‘ಸಂವಿಧಾನದ ಪ್ರತಿ ಸುಟ್ಟವರ ಬಗ್ಗೆಯಾಗಲೀ, ಸಂವಿಧಾನವನ್ನೇ ಬದಲಾಯಿಸುವುದಾಗಿ ಹೇಳಿದವರ ಬಗ್ಗೆಯಾಗಲೀ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು (ಸುಮೊಟೊ) ವಿಚಾರಣೆ ನಡೆಸದ ನ್ಯಾಯಾಲಯ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದರಲ್ಲೇ ವೃತ್ತಿ ಜೀವನ ಕಳೆದ, ನ್ಯಾಯಾಂಗದ ಘನತೆ ಉಳಿಸಲಿಕ್ಕಾಗಿ ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡುವುದು ನ್ಯಾಯವೇ’ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ನ ಈ ಧೋರಣೆಗೆ ತಮ್ಮ ವಿಷಾದವಿದೆ ಎಂದರು.