ಬಂಡೆಯಂತೆ ನಿಲ್ಲುತ್ತಿದ್ದ ಮಾಧುಸ್ವಾಮಿ: ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಆರೋಪಗಳು ಕೇಳಿ ಬಂದಾಗ, ಇಬ್ಬರನ್ನೂ ಪ್ರಬಲವಾಗಿ ಸಮರ್ಥಿಸಿಕೊಂಡು, ವಿರೋಧ ಪಕ್ಷಗಳ ನಾಯಕರ ಬಾಯಿ ಮುಚ್ಚಿಸಿದ್ದು ಮಾಧುಸ್ವಾಮಿ. ಅಧಿವೇಶನಗಳಲ್ಲಿ ಪ್ರತಿ ಸಲವೂ ಯಡಿಯೂರಪ್ಪ ಅವರ ನೆರವಿಗೆ ಧಾವಿಸುತ್ತಿದ್ದರು. ಈಗ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಮಾಧುಸ್ವಾಮಿಯವರ ಆಪ್ತರು ಹೇಳಿದ್ದಾರೆ.