‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಹರೂ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಆದರೆ, ಅವರದ್ದೇ ಪಕ್ಷದ ಕೋಮುವ್ಯಾದಿ ಹುಳುವೊಂದು ಮೂರನೇ ದರ್ಜೆಯ ಪ್ರಚಾರಕ್ಕಾಗಿ ನೆಹರೂ ಅವರನ್ನು ಟೀಕಿಸುವ ತಂತ್ರದ ಮೊರೆ ಹೋಗಿರುವುದು ಅವರ ಮೂರ್ಖತನದ ಪರಮಾವಧಿ. ಮತ್ತೊಮ್ಮೆ ಹುಟ್ಟಿ ಬಂದು ಅಸಮಾನತೆಯ ಸಂಕಷ್ಟ ಮತ್ತು ಜಾತಿ ಕಾರಣದ ನೋವುಗಳನ್ನು ಅನುಭವಿಸಿದರೆ ಮಾತ್ರ ಇವರಿಗೆ ನೆಹರೂ ಕುರಿತು ಮಾತನಾಡುವ ಅರ್ಹತೆ ದೊರೆಯುತ್ತದೆ’ ಎಂದಿದ್ದಾರೆ.