ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಸಾವಿರಾರು ಗಣ್ಯರು ಆರ್ಎಸ್ಎಸ್ ಮೂಲದಿಂದ ಬಂದವರು. ಆರ್.ಎಸ್.ಎಸ್. ಚಡ್ಡಿ ಪ್ರಭಾವ ಸಿದ್ಧರಾಮಯ್ಯನಿಗೆ ಏನು ಗೊತ್ತು? ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾತೃತ್ವ ಭಾವನೆ ಮೂಡಿಸಿದವರೇ ಆರ್ಎಸ್ಎಸ್ನವರು ಎಂದು ಈಶ್ವರಪ್ಪ ಹೇಳಿದರು.
’ಈಗಾಗಲೇ ಜನ ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ನಿಮಗೆ ಸೋನಿಯಾಗಾಂಧಿ ಬುದ್ಧಿ ಹೇಳಲ್ಲ. ರಾಹುಲ್ ಗಾಂಧಿಗೆ ಬುದ್ದಿ ಇಲ್ಲ. ಖರ್ಗೆ ಅವರ ಮಾತು ನೀವು ಕೇಳಲ್ಲ. ಆದ್ದರಿಂದ ನಿಮ್ಮ ಹುಚ್ಚುತನ ಕೇಳುವವರಿಲ್ಲ. ನೀವು ಎಲ್ಲಿಯೇ ಚುನಾವಣೆಗೆ ನಿಂತರೂ ಈ ಚಡ್ಡಿಯೇ ನಿಮ್ಮನ್ನು ಸೋಲಿಸುತ್ತದೆ’ ಎಂದು ಎಚ್ಚರಿಕೆ ನೀಡಿದರು.