ನೀರಿನಲ್ಲಿ ಮುಳುಗಿದ ದೋಣಿಯಲ್ಲಿದ್ದ ಮೋಹನ ಕೃಷ್ಣಪ್ಪ ಹರಿಕಾಂತ, ಮಂಜುನಾಥ ಬುದ್ಧು ಹರಿಕಾಂತ, ಮಹೇಂದ್ರ ಶಂಕರ ಗಾವಡಿ ಹಾಗೂ ವಿಠ್ಠಲ ಗಾವಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಬೇರೆ ದೋಣಿಯಲ್ಲಿ ತದಡಿ ಬಂದರಿಗೆ ಕರೆದುಕೊಂಡು ಬಂದು, ಅಲ್ಲಿಂದ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮುದ್ರದಲ್ಲಿ ಮುಳುಗಿದ್ದ ದೋಣಿಯನ್ನು ಎಳೆದು ದಡಕ್ಕೆ ತರಲಾಗಿದೆ.