ಯಾವುದೇ ಹಣಕಾಸು ಸಂಸ್ಥೆ ಠೇವಣಿದಾರರಿಗೆ ವಾಗ್ದಾನ ಮಾಡಿದಂತೆ ಅವಧಿ ಪೂರ್ಣಗೊಂಡ ನಂತರ ಬಡ್ಡಿ, ಬೋನಸ್, ಲಾಭದ ರೂಪದಲ್ಲಿ ಮರು ಸಂದಾಯ ಮಾಡದೇ ಇದ್ದರೆ ಅಥವಾ ಮೋಸ ಮಾಡಿದರೆ ಸಂಸ್ಥೆ ಪ್ರವರ್ತಕರ, ನಿರ್ದೇಶಕ, ಪಾಲುದಾರ, ವ್ಯವಸ್ಥಾಪಕ, ನೌಕರ ಶಿಕ್ಷೆಗೆ ಗುರಿಯಾಗುತ್ತಾರೆ. ಹಿಂದೆ ದಂಡ ಮತ್ತು ಜೈಲು ಶಿಕ್ಷೆಯ ಪ್ರಮಾಣ ಕಡಿಮೆ ಇತ್ತು. ಅದನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.