<p><strong>ಮಂಗಳೂರು</strong>: ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಆರ್ಗನೈಸರ್ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಮಹಾತ್ಮ ಗಾಂಧಿ ಅವರನ್ನು ಹೊಗಳಿದ್ದಾರೆ. ಈ ಬಗ್ಗೆ ಅವರು ಪ್ರಾಮಾಣಿಕರಾಗಿದ್ದ ಗಾಂಧೀಜಿ ಕುರಿತ ಅಪಪ್ರಚಾರ ನಿಲ್ಲಿಸಲು ಸ್ವಯಂಸೇವಕರಿಗೆ ಹೇಳಲಿ’ ಎಂದು ಚಿಂತಕ ಸುಧೀಂದ್ರ ಕುಲಕರ್ಣಿ ಸವಾಲು ಹಾಕಿದರು.</p>.<p>ಗಾಂಧೀಜಿಯವರ ಅಪಪ್ರಚಾರಕ್ಕೆ ಉತ್ತರ ರೂಪದಲ್ಲಿ ಲೇಖಕ ಎಂ.ಜಿ. ಹೆಗಡೆ ರಚಿಸಿರುವ ‘ಮಿನುಗು ನೋಟ’ ಕೃತಿಯನ್ನು ಗಾಂಧಿ ವಿಚಾರ ವೇದಿಕೆ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ನಿಮ್ಮ ಸರಸಂಘ ಚಾಲಕರು ಗಾಂಧೀಜಿಯನ್ನು ಹೊಗಳುತ್ತಾರೆ. ನೀವು ನೋಡಿದರೆ, ಗಾಂಧೀಜಿ ಕುರಿತು ಅಪಪ್ರಚಾರ ನಡೆಸುತ್ತಿದ್ದೀರಿ. ನಿಮ್ಮ ನಿಲುವು ಏನು. ಪ್ರಾಮಾಣಿಕ ನಂಬಿಕೆ ಏನು ಎಂದು ಆರ್ಎಸ್ಎಸ್ನವರನ್ನು ಗಾಂಧಿ ವಿಚಾರವಾದಿಗಳು ಪ್ರಶ್ನೆ ಮಾಡಬೇಕು’ ಎಂದರು.</p>.<p>ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ ಮತ್ತು ಮುಸ್ಲಿಂ ವಿರೋಧಿ ಅಲ್ಲದ ಹಿಂದುತ್ವದ ಅಗತ್ಯವಿದೆ. ಕೇವಲ ಹಿಂದೂ ಧರ್ಮದ ಧರ್ಮಾಂಧತೆ ಬಗ್ಗೆ ಮಾತನಾಡಿ, ಮುಸ್ಲಿಂ ಧರ್ಮದ ಧರ್ಮಾಂಧತೆ ಕುರಿತ ಮೌನ ಸರಿಯಲ್ಲ. ಮುಸ್ಲಿಮರೂ ತಮ್ಮ ಧರ್ಮದ ಅಸಹಿಷ್ಣುತೆ, ಉಗ್ರವಾದದ ಬಗ್ಗೆ ಹೋರಾಡಬೇಕು’ ಎಂದರು.</p>.<p>‘ಗಾಂಧೀಜಿ ವಿರುದ್ಧ ದುರುದ್ದೇಶಪೂರ್ವಕವಾಗಿ ವಿಷ ಕಾರುವುದಕ್ಕೆ ಉತ್ತರಿಸದಿದ್ದರೆ ಅವರ ವಿಚಾರದ ಕುರಿತ ನಮ್ಮ ಬದ್ಧತೆಯೇ ಪ್ರಶ್ನಾರ್ಹವಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಆರ್ಗನೈಸರ್ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಮಹಾತ್ಮ ಗಾಂಧಿ ಅವರನ್ನು ಹೊಗಳಿದ್ದಾರೆ. ಈ ಬಗ್ಗೆ ಅವರು ಪ್ರಾಮಾಣಿಕರಾಗಿದ್ದ ಗಾಂಧೀಜಿ ಕುರಿತ ಅಪಪ್ರಚಾರ ನಿಲ್ಲಿಸಲು ಸ್ವಯಂಸೇವಕರಿಗೆ ಹೇಳಲಿ’ ಎಂದು ಚಿಂತಕ ಸುಧೀಂದ್ರ ಕುಲಕರ್ಣಿ ಸವಾಲು ಹಾಕಿದರು.</p>.<p>ಗಾಂಧೀಜಿಯವರ ಅಪಪ್ರಚಾರಕ್ಕೆ ಉತ್ತರ ರೂಪದಲ್ಲಿ ಲೇಖಕ ಎಂ.ಜಿ. ಹೆಗಡೆ ರಚಿಸಿರುವ ‘ಮಿನುಗು ನೋಟ’ ಕೃತಿಯನ್ನು ಗಾಂಧಿ ವಿಚಾರ ವೇದಿಕೆ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ನಿಮ್ಮ ಸರಸಂಘ ಚಾಲಕರು ಗಾಂಧೀಜಿಯನ್ನು ಹೊಗಳುತ್ತಾರೆ. ನೀವು ನೋಡಿದರೆ, ಗಾಂಧೀಜಿ ಕುರಿತು ಅಪಪ್ರಚಾರ ನಡೆಸುತ್ತಿದ್ದೀರಿ. ನಿಮ್ಮ ನಿಲುವು ಏನು. ಪ್ರಾಮಾಣಿಕ ನಂಬಿಕೆ ಏನು ಎಂದು ಆರ್ಎಸ್ಎಸ್ನವರನ್ನು ಗಾಂಧಿ ವಿಚಾರವಾದಿಗಳು ಪ್ರಶ್ನೆ ಮಾಡಬೇಕು’ ಎಂದರು.</p>.<p>ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ ಮತ್ತು ಮುಸ್ಲಿಂ ವಿರೋಧಿ ಅಲ್ಲದ ಹಿಂದುತ್ವದ ಅಗತ್ಯವಿದೆ. ಕೇವಲ ಹಿಂದೂ ಧರ್ಮದ ಧರ್ಮಾಂಧತೆ ಬಗ್ಗೆ ಮಾತನಾಡಿ, ಮುಸ್ಲಿಂ ಧರ್ಮದ ಧರ್ಮಾಂಧತೆ ಕುರಿತ ಮೌನ ಸರಿಯಲ್ಲ. ಮುಸ್ಲಿಮರೂ ತಮ್ಮ ಧರ್ಮದ ಅಸಹಿಷ್ಣುತೆ, ಉಗ್ರವಾದದ ಬಗ್ಗೆ ಹೋರಾಡಬೇಕು’ ಎಂದರು.</p>.<p>‘ಗಾಂಧೀಜಿ ವಿರುದ್ಧ ದುರುದ್ದೇಶಪೂರ್ವಕವಾಗಿ ವಿಷ ಕಾರುವುದಕ್ಕೆ ಉತ್ತರಿಸದಿದ್ದರೆ ಅವರ ವಿಚಾರದ ಕುರಿತ ನಮ್ಮ ಬದ್ಧತೆಯೇ ಪ್ರಶ್ನಾರ್ಹವಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>