‘ಕನ್ನಡ ಪುಸ್ತಕಗಳಲ್ಲಿ ವ್ಯಾಕರಣ ದೋಷ ಹೆಚ್ಚಿದೆ. ಕರಡು ತಿದ್ದುವವರಿಗೆ ಹಾಗೂ ಲೇಖಕರಿಗೆ ಪುಸ್ತಕ ಪ್ರಾಧಿಕಾರ ಕಾರ್ಯಾಗಾರವನ್ನು ನಡೆಸಬೇಕು. 1977ರ ಬಳಿಕ ರಾಷ್ಟ್ರೀಯ ಪುಸ್ತಕ ಮೇಳ ರಾಜ್ಯದಲ್ಲಿ ನಡೆಯದೇ ಇರುವುದರಿಂದ, ಮೇಳ ನಡೆಸಲು ಪ್ರಾಧಿಕಾರ ಪ್ರಯತ್ನಿಸಿದರೆ ಸಹಕಾರ ನೀಡಲಾಗುವುದು. ಹಾವೇರಿ ಸಮ್ಮೇಳನದ ಬಳಿಕ ಕನ್ನಡ ಪುಸ್ತಕ ಪ್ರಕಾಶಕರ ಹಾಗೂ ಮಾರಾಟಗಾರರ ರಾಜ್ಯಮಟ್ಟದ ಸಮ್ಮೇಳನವನ್ನು ನಡೆಸಲಾಗುವುದು’ ಎಂದು ಅವರು ಹೇಳಿದರು