ಕೊಡಗು ಜಿಲ್ಲೆಯ ಕಿಂಡಿ ಅಣೆಕಟ್ಟು ಭರ್ತಿಯಾಗಿ ಸಂಪಾಜೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರು–ಮಡಿಕೇರಿ ರಸ್ತೆ ಜಲಾವೃತವಾಗಿದ್ದು, ಭಾಗಮಂಡಲ–ತ್ರಿವೇಣಿ ಸಂಗಮ, ಭಾಗಮಂಡಲ–ಮಡಿಕೇರಿ ರಸ್ತೆಯಲ್ಲಿ ಒಂದು ಅಡಿವರೆಗೂ ನೀರು ನಿಂತಿದೆ. ಜನಸಂಚಾರಕ್ಕೆ ಯಾಂತ್ರಿಕ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಕ್ಕೋಡ್ಲು, ಹೊದಕಾನ–ಹೆಮ್ಮತಾಳು ಸೇತುವೆ ಮುಳುಗಡೆಯಾಗಿವೆ.