‘ಸಿ.ಡಿ, ಪೆನ್ ಡ್ರೈವ್, ಲ್ಯಾಪ್ಟಾಪ್ ಮತ್ತು ಇತರ ವಸ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ನನ್ನನ್ನು ಅಪಹರಿಸಲು ಸಂತೋಷ್ ಅವರು ಒಂಬತ್ತು ಜನರನ್ನು ಕಳುಹಿಸಿದ್ದರು. ಘಟನೆ ನಡೆದ ವೇಳೆ ಸಂತೋಷ್ ಅವರು ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಯಾವುದೇ ಕ್ರಮ ಕೈಗೊಳ್ಳದಂತೆ ಯಡಿಯೂರಪ್ಪ ಅವರು ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು’ ಎಂದು ನವೀನ್ ನ್ಯಾಯಾಲಯಕ್ಕೆ ತಿಳಿಸಿದರು.