<p><strong>ಕಲಬುರಗಿ:</strong> ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರರ ಜಾತ್ರೆ ಭಾವೈಕ್ಯತೆಯ ಸಂದೇಶ ಸಾರುತ್ತಿದೆ.</p>.<p>ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶರಣಬಸವೇಶ್ವರರಿಗೆ ಅಪಾರ ಭಕ್ತರಿದ್ದಾರೆ. ಅಮಾವಾಸ್ಯೆ, ಶ್ರಾವಣ ಸೋಮವಾರ, ಜಾತ್ರೆಯ ದಿನ ಅನೇಕ ಮುಸ್ಲಿಮರು ದೇವಸ್ಥಾನಕ್ಕೆ ಆಗಮಿಸಿ ಸರತಿಯಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆಯುತ್ತಾರೆ.</p>.<p>ಈಗ ರಾಜ್ಯದ ಕೆಲ ಧಾರ್ಮಿಕ ಸ್ಥಳಗಳಲ್ಲಿ ‘ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ’ ಎನ್ನುವ ಕೂಗಿಗೇ ಅಪವಾದ ಎನ್ನುವಂತೆ ಅದೆಷ್ಟೋ ಮುಸ್ಲಿಂ ವ್ಯಾಪಾರಸ್ಥರು ಇಲ್ಲಿಯ ಜಾತ್ರೆಯಲ್ಲಿ ಅಂಗಡಿ ಇಟ್ಟು ನೆಮ್ಮದಿಯಿಂದ ವಹಿವಾಟು ನಡೆಸುತ್ತಿದ್ದಾರೆ.</p>.<p>ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ವಿವಿಧ ಬಗೆಯ ತಿನಿಸು, ಆಟ, ಆಲಂಕಾರಿಕ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಬಳೆ, ಕುಂಕುಮಗಳನ್ನು ಮಸ್ಲಿಂ ಸಮುದಾಯದವರೇ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ.</p>.<p>ಒಂದೇ ಕಡೆ ಸುಮಾರು 20 ಅಂಗಡಿಗಳಿದ್ದು, ಹಿಂದೂ ಮಹಿಳೆಯರು ತಮಗೆ ಬೇಕಾದ ಬಣ್ಣ ಬಣ್ಣದ ಬಳೆ ಆರಿಸಿಕೊಂಡು ಮುಸ್ಲಿಂ ಮಹಿಳೆಯರಿಂದಲೇ ತೊಡಿಸಿಕೊಳ್ಳುತ್ತಿದ್ದಾರೆ. ಮುಸ್ಲಿಂ ವೃದ್ಧರೊಬ್ಬರು ಕುಂಕುಮ, ವಿಭೂತಿ, ರುದ್ರಾಕ್ಷಿ ಮಾರಾಟ ಮಾಡುತ್ತಿರುವುದು ವಿಶೇಷ.</p>.<p>ಫಕೀರರೊಬ್ಬರು ಶರಣಬಸವೇಶ್ವರರ ಭವ್ಯ ರಥದ ಮುಂದೆ ನಿಂತು ಜನರಿಗೆ ನವಿಲು ಗರಿಯಿಂದ ಆಶೀರ್ವಾದ ಮಾಡುವುದು, ಜನರು ಭಕ್ತಿಯಿಂದ ಕಾಣಿಕೆ ನೀಡುವುದು, ಮುಸ್ಲಿಂ ಸಮುದಾಯದವರು ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸುವುದು ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ.</p>.<p>*<br />ಬಸವ ಜಯಂತಿ ಮುನ್ನ ನನ್ನ ಮೊಮ್ಮಗಳ ಮದುವೆ ಇದೆ. ಜಾತ್ರೆಯಲ್ಲಿ ಬಳೆ ಇಡಿಸಿದರೆ ಶುಭ ಎಂದು ಬಳೆ ತೊಡಿಸಿದ್ದೇನೆ.<br /><em><strong>–ಸಿದ್ದಮ್ಮ, ಸೊಲ್ಲಾಪುರ, </strong></em></p>.<p><strong>*</strong><br />ಮುಸ್ಲಿಂ ವ್ಯಾಪಾರಸ್ಥರಿಗೆ ಅನುಮತಿ ಕೊಡಬೇಡಿ ಎಂದು ನಮಗೆ ಯಾವುದೇ ಮನವಿ ಬಂದಿಲ್ಲ. ಪ್ರತಿ ವರ್ಷದಂತೆ ಎಲ್ಲರಿಗೂ ಅನುಮತಿ ನೀಡಿದ್ದೇವೆ.<br /><strong><em>–ಬಸವರಾಜ ದೇಶಮುಖ,</em>ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರರ ಜಾತ್ರೆ ಭಾವೈಕ್ಯತೆಯ ಸಂದೇಶ ಸಾರುತ್ತಿದೆ.</p>.<p>ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶರಣಬಸವೇಶ್ವರರಿಗೆ ಅಪಾರ ಭಕ್ತರಿದ್ದಾರೆ. ಅಮಾವಾಸ್ಯೆ, ಶ್ರಾವಣ ಸೋಮವಾರ, ಜಾತ್ರೆಯ ದಿನ ಅನೇಕ ಮುಸ್ಲಿಮರು ದೇವಸ್ಥಾನಕ್ಕೆ ಆಗಮಿಸಿ ಸರತಿಯಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆಯುತ್ತಾರೆ.</p>.<p>ಈಗ ರಾಜ್ಯದ ಕೆಲ ಧಾರ್ಮಿಕ ಸ್ಥಳಗಳಲ್ಲಿ ‘ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ’ ಎನ್ನುವ ಕೂಗಿಗೇ ಅಪವಾದ ಎನ್ನುವಂತೆ ಅದೆಷ್ಟೋ ಮುಸ್ಲಿಂ ವ್ಯಾಪಾರಸ್ಥರು ಇಲ್ಲಿಯ ಜಾತ್ರೆಯಲ್ಲಿ ಅಂಗಡಿ ಇಟ್ಟು ನೆಮ್ಮದಿಯಿಂದ ವಹಿವಾಟು ನಡೆಸುತ್ತಿದ್ದಾರೆ.</p>.<p>ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ವಿವಿಧ ಬಗೆಯ ತಿನಿಸು, ಆಟ, ಆಲಂಕಾರಿಕ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಬಳೆ, ಕುಂಕುಮಗಳನ್ನು ಮಸ್ಲಿಂ ಸಮುದಾಯದವರೇ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ.</p>.<p>ಒಂದೇ ಕಡೆ ಸುಮಾರು 20 ಅಂಗಡಿಗಳಿದ್ದು, ಹಿಂದೂ ಮಹಿಳೆಯರು ತಮಗೆ ಬೇಕಾದ ಬಣ್ಣ ಬಣ್ಣದ ಬಳೆ ಆರಿಸಿಕೊಂಡು ಮುಸ್ಲಿಂ ಮಹಿಳೆಯರಿಂದಲೇ ತೊಡಿಸಿಕೊಳ್ಳುತ್ತಿದ್ದಾರೆ. ಮುಸ್ಲಿಂ ವೃದ್ಧರೊಬ್ಬರು ಕುಂಕುಮ, ವಿಭೂತಿ, ರುದ್ರಾಕ್ಷಿ ಮಾರಾಟ ಮಾಡುತ್ತಿರುವುದು ವಿಶೇಷ.</p>.<p>ಫಕೀರರೊಬ್ಬರು ಶರಣಬಸವೇಶ್ವರರ ಭವ್ಯ ರಥದ ಮುಂದೆ ನಿಂತು ಜನರಿಗೆ ನವಿಲು ಗರಿಯಿಂದ ಆಶೀರ್ವಾದ ಮಾಡುವುದು, ಜನರು ಭಕ್ತಿಯಿಂದ ಕಾಣಿಕೆ ನೀಡುವುದು, ಮುಸ್ಲಿಂ ಸಮುದಾಯದವರು ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸುವುದು ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ.</p>.<p>*<br />ಬಸವ ಜಯಂತಿ ಮುನ್ನ ನನ್ನ ಮೊಮ್ಮಗಳ ಮದುವೆ ಇದೆ. ಜಾತ್ರೆಯಲ್ಲಿ ಬಳೆ ಇಡಿಸಿದರೆ ಶುಭ ಎಂದು ಬಳೆ ತೊಡಿಸಿದ್ದೇನೆ.<br /><em><strong>–ಸಿದ್ದಮ್ಮ, ಸೊಲ್ಲಾಪುರ, </strong></em></p>.<p><strong>*</strong><br />ಮುಸ್ಲಿಂ ವ್ಯಾಪಾರಸ್ಥರಿಗೆ ಅನುಮತಿ ಕೊಡಬೇಡಿ ಎಂದು ನಮಗೆ ಯಾವುದೇ ಮನವಿ ಬಂದಿಲ್ಲ. ಪ್ರತಿ ವರ್ಷದಂತೆ ಎಲ್ಲರಿಗೂ ಅನುಮತಿ ನೀಡಿದ್ದೇವೆ.<br /><strong><em>–ಬಸವರಾಜ ದೇಶಮುಖ,</em>ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>