ಸಚಿವರ ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದ 15 ಜನ ಯುವಕರು ಮತ್ತು ಎರಡು ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ಬಂದಿರುವವರು ಯಾರೂ ಸಹ ಸ್ಥಳೀಯರಲ್ಲ. ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ಹಾಸನ, ಮಂಗಳೂರಿನವರು. ಬಹಳ ವ್ಯವಸ್ಥಿತವಾಗಿ ಬಂದಿರುವುದನ್ನು ನೋಡಿದರೆ ನಾಗೇಶ್ ಪ್ರಾಣ ತೆಗೆಯುತ್ತಿದ್ದರೆನೋ ಎನ್ನುವಂತಿದೆ. ಸಚಿವರ ಮನೆಗೆ, ಸಚಿವರಿಗೆ ಸೂಕ್ತ ಭದ್ರತೆ ನೀಡಲಾಗುವುದು ಎಂದು ತಿಳಿಸಿದರು.