ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಗಳಾದ ನೆಹರು, ಎಂ.ಯು.ಸುನೀಲ್, ರಮೇಶ್, ಪ್ರದೀಪ್, ಲೋಕೇಶ್, ತನುಕುಮಾರ್, ಎಂ.ಎಲ್.ಸುನೀಲ್ ಹಾಗೂ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದರು. ಡಿವೈಎಸ್ಪಿ ಜಯಕುಮಾರ್ ಅವರು ಎಸ್ಪಿಗೆ ಸಲ್ಲಿಸಿದ್ದ ಪ್ರಾಥಮಿಕ ವರದಿಯನ್ನೂ ಸಿಐಡಿ ತಂಡವು ಪಡೆದುಕೊಂಡಿತು. ಇನ್ನೂ ಎರಡು ದಿನ ತನಿಖೆ ನಡೆಯಲಿದ್ದು, ರಾಯ್ ಅವರ ಕುಟುಂಬಸ್ಥರು ಹಾಗೂ ಕ್ರೈಸ್ತ ಧರ್ಮದ ಮುಖಂಡರಿಂದ ತಂಡವು ಮಾಹಿತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.