‘ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಕಳೆದ 200 ವರ್ಷಗಳಿಂದ ಎಷ್ಟು ಪ್ರಮಾಣದ ಅನ್ಯಾಯ ಆಗಿದೆ ಎಂಬ ಕುರಿತು ಸದನದಲ್ಲಿ ಕೂಲಂಕುಷವಾಗಿ ಪ್ರಸ್ತಾಪಿಸಬಲ್ಲೆ. ಕುಡಿಯುವ ನೀರಿನ ಅತಿಯಾದ ಸಮಸ್ಯೆ ಕರ್ನಾಟಕದಾದ್ಯಂತ ಇದೆ. ಆದರೆ, ಕಡೆಯ ಪಕ್ಷ ಬೆಂಗಳೂರು ನಗರಕ್ಕೆ ಅಗತ್ಯ ಪ್ರಮಾಣದ ನೀರನ್ನು ಹಂಚಿಕೆ ಮಾಡಲು ಪಕ್ಷಭೇದ ಮರೆತು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.