‘ಮಠ’, ‘ಎದ್ದೇಳು ಮಂಜುನಾಥ್’, ‘ಡೈರೆಕ್ಟರ್ ಸ್ಪೆಷಲ್’ ಸೇರಿದಂತೆ ಹಲವು ಸಿನಿಮಾಗಳನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಸ್ನೇಹಿತ ಶ್ರೀನಿವಾಸ್ ಅವರಿಂದ ಸಾಲ ಪಡೆದಿದ್ದ ಗುರುಪ್ರಸಾದ್, ಅದನ್ನು ವಾಪಸು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಶ್ರೀನಿವಾಸ್, ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು.