ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ: ವಿಳಾಸ, ಮತ್ತಿತರ ವಿವರಗಳು ಇಲ್ಲಿವೆ

Last Updated 1 ಸೆಪ್ಟೆಂಬರ್ 2021, 3:24 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ಯುವ ಕಥಾ ಸ್ಪರ್ಧೆಗೆ 35 ವರ್ಷದೊಳಗಿನವರಿಂದ ಕಥೆಗಳನ್ನು ಆಹ್ವಾನಿಸಿದೆ.

ಬಹುಮಾನಿತ ಕಥೆಗೆ ₹ 10 ಸಾವಿರ, ಒಪ್ಪಿತ ಎರಡು ಕಥೆಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನವನ್ನು ಕೊಡಲಾಗುತ್ತದೆ. ಕಥೆಗಳಿಗೆ ಪದಗಳ ಮಿತಿಯಿಲ್ಲ. ಕಥೆಗಳು ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ‍ಪ್ರಕಟವಾಗಿರಬಾರದು. ಕಥೆಗಳು ನುಡಿ ತಂತ್ರಾಂಶದಲ್ಲಿರುವುದು ಕಡ್ಡಾಯ. ಜನ್ಮ ದಿನಾಂಕ ದೃಢೀಕರಣ ಪತ್ರದೊಂದಿಗೆ ಪರಿಚಯ, ಭಾವಚಿತ್ರ, ವಿಳಾಸವನ್ನು ಪ್ರತ್ಯೇಕ ಪುಟದಲ್ಲಿ ಲಗತ್ತಿಸಿರಬೇಕು.

ಕಥೆಗಳನ್ನು ಸೆ.30ರೊಳಗೆsangaata2018@gmail.comಗೆ ಕಳುಹಿಸಿಕೊಡಬೇಕು. ಬಹುಮಾನಿತ ಕಥೆಗಳನ್ನು ‘ಅಕ್ಷರ ಸಂಗಾತ’ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸಂಪಾದಕ ಟಿ.ಎಸ್. ಗೊರವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT