<p><strong>ಬೆಂಗಳೂರು</strong>: ಹೆಚ್ಚುತ್ತಿರುವ ಕೋಮುವಾದದಿಂದ ಕರ್ನಾಟಕಕ್ಕೆ ಕಾದಿರುವ ಅಪಾಯದ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಆತಂಕ ಹೊರಹಾಕಿದ್ದಾರೆ.</p>.<p>ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಾ, ‘ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕವು ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು’ ಎಂದು ತಿಳಿಸಿದ್ದಾರೆ.</p>.<p>‘ಒಂದು ವೇಳೆ, ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ. ಬಸವರಾಜ ಬೊಮ್ಮಾಯಿಯವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ’ ಎಂದು ಶಾ ಒತ್ತಾಯಿಸಿದ್ದಾರೆ.</p>.<p>ಇದೇ ವೇಳೆ, ಹಲಾಲ್ ಕುರಿತು ವ್ಯಕ್ತಿಯೊಬ್ಬರ ಕಾಮೆಂಟ್ಗೆ ಪ್ರತಿಕ್ರಿಯಿಸಿರುವ ಶಾ, ‘ಗಲ್ಫ್ ರಾಷ್ಟ್ರಗಳಿಗೆ ಮಾಂಸವನ್ನು ರಫ್ತು ಮಾಡಲು ಹಲಾಲ್ನ ಪ್ರಮಾಣ ಪತ್ರದ ಅವಶ್ಯಕತೆ ಇದೆ. ಆದರಿಂದ, ರಫ್ತು ಮಾಡುವುದನ್ನೇ ಬಿಡಿ’ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="http://https://www.prajavani.net/karnataka-news/government-stand-on-halal-not-cleared-yet-as-bommai-reject-to-reaction-924292.html" target="_blank"><strong>ಹಲಾಲ್ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಲು ಸಿಎಂ ನಕಾರ</strong></a></p>.<p>ಹಿಜಾಬ್ ಸಂಘರ್ಷ, ಮುಸ್ಲಿಮರ ಅಂಗಡಿಗಳಿಗೆ ನಿಷೇಧ ಹಾಗೂ ಹಲಾಲ್ಗೆ ವಿರೋಧದಂತಹ ಬೆಳವಣಿಗಳನ್ನು ಒಳಗೊಂಡಿರುವ ‘ದಿ ಇಂಡಿಯನ್ ಎಕ್ಸಪ್ರೆಸ್’ ವರದಿಯನ್ನು ಶಾ ಅವರು ತಮ್ಮ ಟ್ವೀಟ್ ಜೊತೆ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹೆಚ್ಚುತ್ತಿರುವ ಕೋಮುವಾದದಿಂದ ಕರ್ನಾಟಕಕ್ಕೆ ಕಾದಿರುವ ಅಪಾಯದ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಆತಂಕ ಹೊರಹಾಕಿದ್ದಾರೆ.</p>.<p>ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಾ, ‘ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕವು ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು’ ಎಂದು ತಿಳಿಸಿದ್ದಾರೆ.</p>.<p>‘ಒಂದು ವೇಳೆ, ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ. ಬಸವರಾಜ ಬೊಮ್ಮಾಯಿಯವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ’ ಎಂದು ಶಾ ಒತ್ತಾಯಿಸಿದ್ದಾರೆ.</p>.<p>ಇದೇ ವೇಳೆ, ಹಲಾಲ್ ಕುರಿತು ವ್ಯಕ್ತಿಯೊಬ್ಬರ ಕಾಮೆಂಟ್ಗೆ ಪ್ರತಿಕ್ರಿಯಿಸಿರುವ ಶಾ, ‘ಗಲ್ಫ್ ರಾಷ್ಟ್ರಗಳಿಗೆ ಮಾಂಸವನ್ನು ರಫ್ತು ಮಾಡಲು ಹಲಾಲ್ನ ಪ್ರಮಾಣ ಪತ್ರದ ಅವಶ್ಯಕತೆ ಇದೆ. ಆದರಿಂದ, ರಫ್ತು ಮಾಡುವುದನ್ನೇ ಬಿಡಿ’ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="http://https://www.prajavani.net/karnataka-news/government-stand-on-halal-not-cleared-yet-as-bommai-reject-to-reaction-924292.html" target="_blank"><strong>ಹಲಾಲ್ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಲು ಸಿಎಂ ನಕಾರ</strong></a></p>.<p>ಹಿಜಾಬ್ ಸಂಘರ್ಷ, ಮುಸ್ಲಿಮರ ಅಂಗಡಿಗಳಿಗೆ ನಿಷೇಧ ಹಾಗೂ ಹಲಾಲ್ಗೆ ವಿರೋಧದಂತಹ ಬೆಳವಣಿಗಳನ್ನು ಒಳಗೊಂಡಿರುವ ‘ದಿ ಇಂಡಿಯನ್ ಎಕ್ಸಪ್ರೆಸ್’ ವರದಿಯನ್ನು ಶಾ ಅವರು ತಮ್ಮ ಟ್ವೀಟ್ ಜೊತೆ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>