ಶಿವಮೊಗ್ಗದ ಡೊಳ್ಳು ಕಲಾವಿದ ದೊಂಬರ ಹುಚ್ಚಪ್ಪ ಕೊಟ್ಟ, ಮಂಡ್ಯದ ಜನಪದ ಗಾಯಕ ವಿ .ಈ.ಲೋಕೇಶ್, ಕಲಬುರ್ಗಿ ಜಿಲ್ಲೆಯ ತತ್ವಪದ ಕಲಾವಿದೆ ಶರಣಮ್ಮ ಪಿ.ಸಜ್ಜನ, ಚಿಕ್ಕಮಗಳೂರು ಜಿಲ್ಲೆಯ ಅಲೆಮಾರಿ ಸಮುದಾಯದ ಗಾಯಕಿಯರಾದ ನ್ಯೂಸ್ಜೀ ಮತ್ತು ಚಿಟ್ಟಿನ್ಬಿ, ಉತ್ತರ ಕನ್ನಡ ಜಿಲ್ಲೆಯ ಜನಪದ ವೈದ್ಯ ಹನುಮಂತಗೌಡ ಬೆಳಂಬಾರ, ದಕ್ಷಿಣ ಕನ್ನಡ ಜಿಲ್ಲೆಯ ದೈವಪಾತ್ರಿ ಕಲಾವಿದ ಭೋಜ ಪೂಜಾರಿ, ಗದಗದ ಲಂಬಾಣಿ ಕಸೂತಿ ಕಲಾವಿದೆ ಸೋಮವ್ವ ಲಮಾಣಿ,ಬಳ್ಳಾರಿಯ ಬಯಲಾಟ ಪ್ರಸಾದನ ಕಲಾವಿದ ಕೊಟ್ಗೆ ಹಾಲೇಶಪ್ಪ, ಮಂಡ್ಯದ ಪೂಜಾ ಕುಣಿತ ಕಲಾವಿದ ಸಿದ್ದೇಗೌಡ, ಕೋಲಾಟ ಕಲಾವಿದ ಹೊನ್ನಯ್ಯ, ಗದಗದ ಜೋಗತಿ ನೃತ್ಯ ಕಲಾವಿದ ಶಂಕರಪ್ಪ ಸಂಕಣ್ಣವರ, ಉತ್ತರ ಕನ್ನಡ ಜಿಲ್ಲೆಯ ಜನಪದ ಹಾಡುಗಾರ್ತಿ ಕೇಶಿ ಗೋವಿಂದಗೌಡ, ಯಾದಗಿರಿಯ ಜನಪದ ಗಾಯಕ ನೀಲಪ್ಪ ಚೌದರಿ, ಹಾಸನದರಂಗದ ಕುಣಿತ ಕಲಾವಿದ ಬಿ.ಟಿ.ಮಾನವ, ರಾಯಚೂರಿನ ಹಗಲುವೇಷ ಕಲಾವಿದ ಜಂಬಣ್ಣ ಶಂಕ್ರಪ್ಪ ಹಸಮಕಲ್, ರಾಮನಗರದ ಪಟ ಕುಣಿತ ಕಲಾವಿದ ರಂಗಯ್ಯ ಅವರಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು.