ಬೆಂಗಳೂರು: ‘ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ!’ ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಅವರ ಇತಿಹಾಸವನ್ನೂ ಕೆದಕುವ ಮೂಲಕ #ಕಾಂಗ್ರೆಸ್ಯೋಗ್ಯರಾ ಎಂಬ ಹ್ಯಾಷ್ಟ್ಯಾಗ್ ಬಳಸಿ ವ್ಯಂಗ್ಯವಾಡಿದೆ.
‘ಹೌದು, ಕೆಲ (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ! ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು. ಹಾಗಾದರೆ (ಅ)ಯೋಗ್ಯರು ಯಾರು?’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿರುವ ಬಿಜೆಪಿ, ನೆಹರು ಕುರಿತ ಕೆಲವು ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.
‘ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂಸತ್ತನ್ನು ಅಮಾನತಿನಲ್ಲಿಟ್ಟು ಅಧಿಕಾರ ಉಳಿಸಿಕೊಂಡಿದ್ದರು. ಹಾಗಾದರೆ (ಅ)ಯೋಗ್ಯರು ಯಾರು’ ಎಂದು ಮತ್ತೊಂದು ಟ್ವೀಟ್ನಲ್ಲಿ ಪ್ರಶ್ನಿಸಲಾಗಿದ್ದು, ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ಹಳೆಯ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.
‘ಕೆಲವು (ಅ)ಯೋಗ್ಯರು ಸೃಷ್ಟಿಸುವ ಇತಿಹಾಸದ ಪುಟದಲ್ಲಿ ರಕ್ತದ ಕಲೆಗಳೇ ಹೆಚ್ಚು. ಅವರು ಅಪರಾಧಿಗಳು ದೇಶಬಿಟ್ಟು ಹೋಗಲು ಸಹಕಾರ ನೀಡುತ್ತಾರೆ, ಅಪರಾಧಿಗಳಿಗೆ ಅಧಿಕಾರವನ್ನೂ ನೀಡುತ್ತಾರೆ! ಹಾಗಾದರೆ, (ಅ)ಯೋಗ್ಯರು ಯಾರು’ ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಪ್ರಶ್ನಿಸಿದೆ.
ಕೆಲವು (ಅ)ಯೋಗ್ಯರು ಸೃಷ್ಟಿಸುವ ಇತಿಹಾಸದ ಪುಟದಲ್ಲಿ ರಕ್ತದ ಕಲೆಗಳೇ ಹೆಚ್ಚು.
— BJP Karnataka (@BJP4Karnataka) August 7, 2021
ಅವರು ಅಪರಾಧಿಗಳು ದೇಶಬಿಟ್ಟು ಹೋಗಲು ಸಹಕಾರ ನೀಡುತ್ತಾರೆ, ಅಪರಾಧಿಗಳಿಗೆ ಅಧಿಕಾರವನ್ನೂ ನೀಡುತ್ತಾರೆ!
ಹಾಗಾದರೆ, (ಅ)ಯೋಗ್ಯರು ಯಾರು @INCKarnataka !?#ಕಾಂಗ್ರೆಸ್ಯೋಗ್ಯರಾ!? pic.twitter.com/AyzQ8LS3w3
ಹೌದು, ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ!
— BJP Karnataka (@BJP4Karnataka) August 7, 2021
ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂಸತ್ತನ್ನು ಅಮಾನತಿನಲ್ಲಿಟ್ಟು ಅಧಿಕಾರ ಉಳಿಸಿಕೊಂಡಿದ್ದರು.
ಹಾಗಾದರೆ (ಅ)ಯೋಗ್ಯರು ಯಾರು @INCKarnataka !?#ಕಾಂಗ್ರೆಸ್ಯೋಗ್ಯರಾ!? pic.twitter.com/GJmojesqDR
ಹೌದು, ಕೆಲ (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ!
— BJP Karnataka (@BJP4Karnataka) August 7, 2021
ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು.
ಹಾಗಾದರೆ (ಅ)ಯೋಗ್ಯರು ಯಾರು @INCKarnataka !?#ಕಾಂಗ್ರೆಸ್ಯೋಗ್ಯರಾ!? pic.twitter.com/as8hx3iL8v
ಹೌದು, ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ,
— BJP Karnataka (@BJP4Karnataka) August 7, 2021
ದೇಶದ ಪ್ರಧಾನಿಯನ್ನೇ ಅಂಕೆಯಲ್ಲಿಟ್ಟುಕೊಂಡು ಕುಟುಂಬದ ಆಡಳಿತ ನಡೆಸುವ ಮೂಲಕ!!
ಅಂಥಹ ಅವಮಾನಕರ ಇತಿಹಾಸ ಸೃಷ್ಟಿಸಿದ ಅ)ಯೋಗ್ಯ ತಾಯಿ- ಮಗ ಯಾರು @INCKarnataka !?#ಕಾಂಗ್ರೆಸ್ಯೋಗ್ಯರಾ!? pic.twitter.com/KJbivtsfnp
ರಾಜ್ಯದಲ್ಲೂ ಇತಿಹಾಸ ಸೃಷ್ಟಿಸಿದ ಕೆಲವು (ಅ)ಯೋಗ್ಯರು!
— BJP Karnataka (@BJP4Karnataka) August 7, 2021
ರೈತರ ಆತ್ಮಹತ್ಯೆ, ಹಿಂದು ಕಾರ್ಯಕರ್ತರ ನರಮೇಧಕ್ಕೆ ಕಾರಣರಾಗಿ, ಶಾಂತಿ ಮಂತ್ರ ಜಪಿಸುತ್ತಲೇ ತಮ್ಮದೇ ಪಕ್ಷದ ಮುಖಂಡರ ಬೆನ್ನಿಗೆ ಇರಿದು ಅಧಿಕಾರ ಪಡೆದಿದ್ದು ಅವರ ಹೆಗ್ಗಳಿಕೆ.
ಹಾಗಾದರೆ, (ಅ)ಯೋಗ್ಯರು ಯಾರು @INCKarnataka !?#ಕಾಂಗ್ರೆಸ್ಯೋಗ್ಯರಾ!?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.