<p><strong>ಬೆಂಗಳೂರು:</strong> ‘ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ!’ ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಅವರ ಇತಿಹಾಸವನ್ನೂ ಕೆದಕುವ ಮೂಲಕ #ಕಾಂಗ್ರೆಸ್ಯೋಗ್ಯರಾ ಎಂಬ ಹ್ಯಾಷ್ಟ್ಯಾಗ್ ಬಳಸಿ ವ್ಯಂಗ್ಯವಾಡಿದೆ.</p>.<p>‘ಹೌದು, ಕೆಲ (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ! ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು. ಹಾಗಾದರೆ (ಅ)ಯೋಗ್ಯರು ಯಾರು?’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿರುವ ಬಿಜೆಪಿ, ನೆಹರು ಕುರಿತ ಕೆಲವು ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.</p>.<p>‘ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂಸತ್ತನ್ನು ಅಮಾನತಿನಲ್ಲಿಟ್ಟು ಅಧಿಕಾರ ಉಳಿಸಿಕೊಂಡಿದ್ದರು. ಹಾಗಾದರೆ (ಅ)ಯೋಗ್ಯರು ಯಾರು’ ಎಂದು ಮತ್ತೊಂದು ಟ್ವೀಟ್ನಲ್ಲಿ ಪ್ರಶ್ನಿಸಲಾಗಿದ್ದು, ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ಹಳೆಯ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.</p>.<p>‘ಕೆಲವು (ಅ)ಯೋಗ್ಯರು ಸೃಷ್ಟಿಸುವ ಇತಿಹಾಸದ ಪುಟದಲ್ಲಿ ರಕ್ತದ ಕಲೆಗಳೇ ಹೆಚ್ಚು. ಅವರು ಅಪರಾಧಿಗಳು ದೇಶಬಿಟ್ಟು ಹೋಗಲು ಸಹಕಾರ ನೀಡುತ್ತಾರೆ, ಅಪರಾಧಿಗಳಿಗೆ ಅಧಿಕಾರವನ್ನೂ ನೀಡುತ್ತಾರೆ! ಹಾಗಾದರೆ, (ಅ)ಯೋಗ್ಯರು ಯಾರು’ ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಪ್ರಶ್ನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ!’ ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಅವರ ಇತಿಹಾಸವನ್ನೂ ಕೆದಕುವ ಮೂಲಕ #ಕಾಂಗ್ರೆಸ್ಯೋಗ್ಯರಾ ಎಂಬ ಹ್ಯಾಷ್ಟ್ಯಾಗ್ ಬಳಸಿ ವ್ಯಂಗ್ಯವಾಡಿದೆ.</p>.<p>‘ಹೌದು, ಕೆಲ (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ! ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು. ಹಾಗಾದರೆ (ಅ)ಯೋಗ್ಯರು ಯಾರು?’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿರುವ ಬಿಜೆಪಿ, ನೆಹರು ಕುರಿತ ಕೆಲವು ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.</p>.<p>‘ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂಸತ್ತನ್ನು ಅಮಾನತಿನಲ್ಲಿಟ್ಟು ಅಧಿಕಾರ ಉಳಿಸಿಕೊಂಡಿದ್ದರು. ಹಾಗಾದರೆ (ಅ)ಯೋಗ್ಯರು ಯಾರು’ ಎಂದು ಮತ್ತೊಂದು ಟ್ವೀಟ್ನಲ್ಲಿ ಪ್ರಶ್ನಿಸಲಾಗಿದ್ದು, ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ಹಳೆಯ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.</p>.<p>‘ಕೆಲವು (ಅ)ಯೋಗ್ಯರು ಸೃಷ್ಟಿಸುವ ಇತಿಹಾಸದ ಪುಟದಲ್ಲಿ ರಕ್ತದ ಕಲೆಗಳೇ ಹೆಚ್ಚು. ಅವರು ಅಪರಾಧಿಗಳು ದೇಶಬಿಟ್ಟು ಹೋಗಲು ಸಹಕಾರ ನೀಡುತ್ತಾರೆ, ಅಪರಾಧಿಗಳಿಗೆ ಅಧಿಕಾರವನ್ನೂ ನೀಡುತ್ತಾರೆ! ಹಾಗಾದರೆ, (ಅ)ಯೋಗ್ಯರು ಯಾರು’ ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಪ್ರಶ್ನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>