‘2017ರಲ್ಲಿ ಕಾಂಗ್ರೆಸ್ ಸರ್ಕಾರದ ಕುರಿತು ಪತ್ರಿಕೆಗಳು ಪ್ರಕಟಿಸಿದ್ದ ವರದಿಗೆ ಬೊಮ್ಮಾಯಿ ಅವರ ಫೋಟೊ ಹಾಕಿ ಡಿಕೆಶಿ ಬಣ ವೈರಲ್ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಜಾತ್ರೆಯನ್ನು ಕಾಂಗ್ರೆಸ್ ಕಾರ್ಯಕರ್ತರೇ ಮುನ್ನಲೆಗೆ ತಂದಿರುವುದು ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದಾಗಿಯೇ’ ಎಂದು ಬಿಜೆಪಿ ಗುಡುಗಿದೆ.
2017ರಲ್ಲಿ ಆಂಗ್ಲ ದೈನಿಕ ಸೇರಿದಂತೆ ಕನ್ನಡದ ಪತ್ರಿಕೆಗಳಲ್ಲಿ ‘ಕರ್ನಾಟಕ ದಿ ಮೋಸ್ಟ್ ಕರಪ್ಟ್ ಸ್ಟೇಟ್’, ‘ಲಂಚಗುಳಿತನ, ರಾಜ್ಯಕ್ಕೆ ಪ್ರಥಮ ಸ್ಥಾನ’ ಎಂಬ ತಲೆಬರಹದಡಿ ಖಾಸಗಿ ಸಂಸ್ಥೆ ನಡೆಸಿದ್ದ ವರದಿಯನ್ನು ಪ್ರಕಟಿಸಿದ್ದವು. ಸಿದ್ದರಾಮಯ್ಯನವರೇ ‘ಭ್ರಷ್ಟಾಚಾರದ ಜನಕ’ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ’ ಎಂದು ಬಿಜೆಪಿ ಕಿಡಿಕಾರಿದೆ.