<p><strong>ಬೆಂಗಳೂರು: </strong>ಭ್ರಷ್ಟಾಚಾರದ ವರದಿ ಕುರಿತು ನಿರ್ಲಜ್ಜತನದ ಮೂಲಕ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.</p>.<p>2017ರಲ್ಲಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತಾದ ವರದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಲಂಚಗುಳಿತನ: ರಾಜ್ಯಕ್ಕೆ ಅಗ್ರಸ್ಥಾನ’ ಎಂದು ಪ್ರಕಟವಾದ ಮಾಧ್ಯಮ ವರದಿಯ ದಿನಾಂಕವನ್ನೂ ಓದಲಾರದಷ್ಟು ದೊಡ್ಡ ದೃಷ್ಟಿದೋಷ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆಯೇ’ ಎಂದು ಪ್ರಶ್ನಿಸಿದೆ.</p>.<p>‘2017ರಲ್ಲಿ ಕಾಂಗ್ರೆಸ್ ಸರ್ಕಾರದ ಕುರಿತು ಪತ್ರಿಕೆಗಳು ಪ್ರಕಟಿಸಿದ್ದ ವರದಿಗೆ ಬೊಮ್ಮಾಯಿ ಅವರ ಫೋಟೊ ಹಾಕಿ ಡಿಕೆಶಿ ಬಣ ವೈರಲ್ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಜಾತ್ರೆಯನ್ನು ಕಾಂಗ್ರೆಸ್ ಕಾರ್ಯಕರ್ತರೇ ಮುನ್ನಲೆಗೆ ತಂದಿರುವುದು ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದಾಗಿಯೇ’ ಎಂದು ಬಿಜೆಪಿ ಗುಡುಗಿದೆ.<br /><br />2017ರಲ್ಲಿ ಆಂಗ್ಲ ದೈನಿಕ ಸೇರಿದಂತೆ ಕನ್ನಡದ ಪತ್ರಿಕೆಗಳಲ್ಲಿ ‘ಕರ್ನಾಟಕ ದಿ ಮೋಸ್ಟ್ ಕರಪ್ಟ್ ಸ್ಟೇಟ್’, ‘ಲಂಚಗುಳಿತನ, ರಾಜ್ಯಕ್ಕೆ ಪ್ರಥಮ ಸ್ಥಾನ’ ಎಂಬ ತಲೆಬರಹದಡಿ ಖಾಸಗಿ ಸಂಸ್ಥೆ ನಡೆಸಿದ್ದ ವರದಿಯನ್ನು ಪ್ರಕಟಿಸಿದ್ದವು. ಸಿದ್ದರಾಮಯ್ಯನವರೇ ‘ಭ್ರಷ್ಟಾಚಾರದ ಜನಕ’ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ’ ಎಂದು ಬಿಜೆಪಿ ಕಿಡಿಕಾರಿದೆ.</p>.<p><strong>ಓದಿ...<a href="https://www.prajavani.net/district/dakshina-kannada/congress-leader-ut-khader-criticised-new-gst-norm-bjp-politics-955751.html" target="_blank">ಶವ ಹೊರುವುದಕ್ಕೂ ಜಿಎಸ್ಟಿ ವಿಧಿಸುವ ದಿನ ದೂರವಿಲ್ಲ: ಯು.ಟಿ.ಖಾದರ್ ಟೀಕೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಭ್ರಷ್ಟಾಚಾರದ ವರದಿ ಕುರಿತು ನಿರ್ಲಜ್ಜತನದ ಮೂಲಕ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.</p>.<p>2017ರಲ್ಲಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತಾದ ವರದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಲಂಚಗುಳಿತನ: ರಾಜ್ಯಕ್ಕೆ ಅಗ್ರಸ್ಥಾನ’ ಎಂದು ಪ್ರಕಟವಾದ ಮಾಧ್ಯಮ ವರದಿಯ ದಿನಾಂಕವನ್ನೂ ಓದಲಾರದಷ್ಟು ದೊಡ್ಡ ದೃಷ್ಟಿದೋಷ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆಯೇ’ ಎಂದು ಪ್ರಶ್ನಿಸಿದೆ.</p>.<p>‘2017ರಲ್ಲಿ ಕಾಂಗ್ರೆಸ್ ಸರ್ಕಾರದ ಕುರಿತು ಪತ್ರಿಕೆಗಳು ಪ್ರಕಟಿಸಿದ್ದ ವರದಿಗೆ ಬೊಮ್ಮಾಯಿ ಅವರ ಫೋಟೊ ಹಾಕಿ ಡಿಕೆಶಿ ಬಣ ವೈರಲ್ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಜಾತ್ರೆಯನ್ನು ಕಾಂಗ್ರೆಸ್ ಕಾರ್ಯಕರ್ತರೇ ಮುನ್ನಲೆಗೆ ತಂದಿರುವುದು ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದಾಗಿಯೇ’ ಎಂದು ಬಿಜೆಪಿ ಗುಡುಗಿದೆ.<br /><br />2017ರಲ್ಲಿ ಆಂಗ್ಲ ದೈನಿಕ ಸೇರಿದಂತೆ ಕನ್ನಡದ ಪತ್ರಿಕೆಗಳಲ್ಲಿ ‘ಕರ್ನಾಟಕ ದಿ ಮೋಸ್ಟ್ ಕರಪ್ಟ್ ಸ್ಟೇಟ್’, ‘ಲಂಚಗುಳಿತನ, ರಾಜ್ಯಕ್ಕೆ ಪ್ರಥಮ ಸ್ಥಾನ’ ಎಂಬ ತಲೆಬರಹದಡಿ ಖಾಸಗಿ ಸಂಸ್ಥೆ ನಡೆಸಿದ್ದ ವರದಿಯನ್ನು ಪ್ರಕಟಿಸಿದ್ದವು. ಸಿದ್ದರಾಮಯ್ಯನವರೇ ‘ಭ್ರಷ್ಟಾಚಾರದ ಜನಕ’ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ’ ಎಂದು ಬಿಜೆಪಿ ಕಿಡಿಕಾರಿದೆ.</p>.<p><strong>ಓದಿ...<a href="https://www.prajavani.net/district/dakshina-kannada/congress-leader-ut-khader-criticised-new-gst-norm-bjp-politics-955751.html" target="_blank">ಶವ ಹೊರುವುದಕ್ಕೂ ಜಿಎಸ್ಟಿ ವಿಧಿಸುವ ದಿನ ದೂರವಿಲ್ಲ: ಯು.ಟಿ.ಖಾದರ್ ಟೀಕೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>