ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಬೆಳ್ಳಿ ಪ್ರಕಾಶ್, ಪರಣ್ಣ ಮುನವಳ್ಳಿ, ರಾಮಪ್ಪ ಲಮಾಣಿ, ನೆಹರು ಓಲೇಕಾರ, ಎ.ಎಸ್.ಪಾಟೀಲ ನಡಹಳ್ಳಿ, ಹರತಾಳು ಹಾಲಪ್ಪ ಅವರೆಲ್ಲ ಸಚಿವ ಸ್ಥಾನಕ್ಕೆ ಶಿಫಾರಸು ಮಾಡುವಂತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದರು. ‘ಸಚಿವ ಸ್ಥಾನ ನಿರ್ಧರಿಸುವುದು ನಾನಲ್ಲ. ವರಿಷ್ಠರ ತೀರ್ಮಾನವೇ ಅಂತಿಮ’ ಎಂದು ಯಡಿಯೂರಪ್ಪ ಹೇಳಿದರು. ಇದರಿಂದ ಶಾಸಕರು ಸಮಾಧಾನಗೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ.