ಬೆಂಗಳೂರು: ಪಿಎಸ್ಐ ನೇಮಕ ಹಗರಣ ಸಂಬಂಧ ಆರೋಪಿ ದಿವ್ಯಾ ಮತ್ತು ಡಿ.ಕೆ. ಶಿವಕುಮಾರ್ ಪರಿಚಿತರು ಎಂಬ ವಿಚಾರವಾಗಿ ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಪಿಎಸ್ಐ ನೇಮಕ ಹಗರಣದ ಆರೋಪಿ ದಿವ್ಯಾ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಬಂದಿದ್ದರು ಎಂಬುದಕ್ಕೆ ಫೋಟೋ ಸಾಕ್ಷಿ ಇದೆ. ಆರೋಪಿಯು ಪರಿಚಿತರು ಎಂದು ಡಿಕೆಶಿ ಒಪ್ಪಿಕೊಂಡಿದ್ದಾರೆ. ಇತರ ಆರೋಪಿಗಳಾದ ರುದ್ರಗೌಡ ಪಾಟೀಲ್, ಶಿವಾನಂದ ಪಾಟೀಲ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದಾರೆ. ಹಾಗಾದರೆ ಈ ಹಗರಣದಲ್ಲಿ ಡಿಕೆಶಿ ಪಾಲೆಷ್ಟು? ಎಂದಿದೆ.
ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿದ್ದು ತಪ್ಪು ಎನ್ನುವ ಕಾಂಗ್ರೆಸ್ಸಿಗರೇ, ಪ್ರೆಸ್ ಮೀಟ್ ಮಾಡಿ ಪುರಾವೆಯಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಲ್ಲವೇ? ಪುರಾವೆ ಇದ್ದಿದ್ದರೆ ತನಿಖಾಧಿಕಾರಿಗಳಿಗೆ ನೀಡದೆ ಇರುವುದು ತಪ್ಪಲ್ಲವೇ? ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದೆ.
ಪಿಎಸ್ಐ ನೇಮಕ ಹಗರಣದ ಆರೋಪಿ ದಿವ್ಯಾ ನಿವಾಸಕ್ಕೆ @DKShivakumar ಬಂದಿದ್ದರು ಎಂಬುದಕ್ಕೆ ಫೋಟೋ ಸಾಕ್ಷಿ ಇದೆ. ಆರೋಪಿಯು ಪರಿಚಿತರು ಎಂದು ಡಿಕೆಶಿ ಒಪ್ಪಿಕೊಂಡಿದ್ದಾರೆ.
— BJP Karnataka (@BJP4Karnataka) April 30, 2022
ಇತರ ಆರೋಪಿಗಳಾದ ರುದ್ರಗೌಡ ಪಾಟೀಲ್, ಶಿವಾನಂದ ಪಾಟೀಲ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದಾರೆ.
ಹಾಗಾದರೆ ಈ ಹಗರಣದಲ್ಲಿ ಡಿಕೆಶಿ ಪಾಲೆಷ್ಟು?#CONgressPSIToolkit
ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿದ್ದು ತಪ್ಪು ಎನ್ನುವ ಕಾಂಗ್ರೆಸ್ಸಿಗರೇ,
— BJP Karnataka (@BJP4Karnataka) April 30, 2022
√ ಪ್ರೆಸ್ ಮೀಟ್ ಮಾಡಿ ಪುರಾವೆಯಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಲ್ಲವೇ?
√ ಪುರಾವೆ ಇದ್ದಿದ್ದರೆ ತನಿಖಾಧಿಕಾರಿಗಳಿಗೆ ನೀಡದೆ ಇರುವುದು ತಪ್ಪಲ್ಲವೇ?
√ ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ?#CONgressPSIToolkit
ಮಾನ್ಯ #ಕನ್ನಡವಿರೋಧಿಸಿದ್ದರಾಮಯ್ಯ ಅವರ ಕನ್ನಡ ಪ್ರೇಮ ರಾಜಕೀಯ ಪ್ರೇರಿತವಲ್ಲವೇ?
— BJP Karnataka (@BJP4Karnataka) April 30, 2022
√ ಬೇಡಿಕೆ ಇಲ್ಲದಿದ್ದರೂ ಕಲ್ಬುರ್ಗಿಯಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪನೆಗೆ ಹೊರಟಿದ್ದು ಏಕೆ?
√ ಪೊಲೀಸರನ್ನು ಉರ್ದು ಕಲಿಯಲು ಒತ್ತಾಯಿಸುವಾಗ ನಿಮ್ಮ ಕನ್ನಡ ಪ್ರೇಮ ಎಲ್ಲಿತ್ತು?
ಉರ್ದು ಭಾಷೆ, ನಿಮ್ಮ ತವರೂರು ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ್ದೇ? pic.twitter.com/y2rcIpm7sd
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.