ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ಕಾಡುಪ್ರಾಣಿ, ಕಾಡುಮನುಷ್ಯ ಇವರೆಡರಲ್ಲಿ ಯಾರು ಒಳ್ಳೆಯವರು? ಸಮಾಜಕ್ಕೆ ಯಾರಿಂದ ಹೆಚ್ಚು ಆಪತ್ತು’ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಅವರು, ‘ಧರ್ಮದ ವಿಚಾರವಾಗಿ ಸಮಾಜ ವಿಭಜಿಸಿದ ಶಾಸಕರನ್ನು ವರುಣಾ ಕ್ಷೇತ್ರದಿಂದಲೇ ಮತದಾರರು ಓಡಿಸಿದ್ದಾರೆ. ಆ ಕಾಡುಪ್ರಾಣಿಯನ್ನು ಜನರುಊರಿಂದ ಓಡಿಸಿದರೆ, ಕಾಡು ಮನುಷ್ಯನನ್ನು ಎರಡೂವರೆ ಲಕ್ಷ ಮತಗಳ ಅಂತರದಿಂದ ಜನರು ಗೆಲ್ಲಿಸಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.