ಖರ್ಗೆ ಅವರ ಸ್ವರ್ಧೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಎಐಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರಿಗೆ ಸೀಮಿತವಾಗಿರಬೇಕು. ವಿಭಿನ್ನ ಬಗೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ತರದ ಜನರ ನಡುವೆ ಸಂಪರ್ಕ ಸಾಧಿಸುವ ವಿಚಾರದಲ್ಲಿ ಖರ್ಗೆಯವರಿಗೆ ಹೆಚ್ಚು ಅನುಕೂಲಕರ ವಾತಾವರಣ ಇದೆ. ಜಮೀನ್ದಾರಿ ಕುಟುಂಬಗಳ ಪ್ರಾಬಲ್ಯ ಹೊಂದಿದ್ದ ಪ್ರದೇಶದಲ್ಲಿ ಕೂಲಿ ಕಾರ್ಮಿಕರಾಗಿದ್ದ ಪರಿಶಿಷ್ಟ ಜಾತಿಯ ಕುಟುಂಬದಲ್ಲಿ ಹುಟ್ಟಿ ಸ್ವಂತ ಶ್ರಮದಿಂದ ಶಿಕ್ಷಣ ಪಡೆದು, ಜಾತಿಯ ಹೆಸರನ್ನು ಬಳಸದೇ ದುಡಿಮೆಯಿಂದಲೇ ಕಾಂಗ್ರೆಸ್ನಲ್ಲಿ ಮುನ್ನೆಲೆಗೆ ಬಂದಿರುವವರು ಅವರು’ ಎಂದಿದ್ದಾರೆ.