ವೇದಿಕೆ ಮುಂಭಾಗದಲ್ಲಿ ಹಾಕಿದ್ದ ಎಲ್ಇಡಿ ಟಿವಿ ಬೀಳಿಸಿ ಅದರ ಮೇಲೆಯೇ ನಡೆದರು. ಮಹಿಳಾ ಪೊಲೀಸರು ತಮ್ಮನ್ನೇ ರಕ್ಷಿಸಿಕೊಳ್ಳಲು ಪರದಾಡುವಂತಾಯಿತು. ಅಭಿಮಾನಿಗಳ ಹುಚ್ಚಾಟಕ್ಕೆ ಗಣ್ಯರ ಆಸನಗಳು ಹಾಗೂ ಮಾಧ್ಯಮ ಗ್ಯಾಲರಿ ಹಾಳಾದವು. ಸುದೀಪ್ ಸನ್ಮಾನ ಸ್ವೀಕರಿಸಿ, ಸ್ವಾಮೀಜಿಯ ಮಾತು ಕೇಳಿ, ಎರಡು ನಿಮಿಷ ಮಾತನಾಡಿ, ಒಂದು ನಿಮಿಷ ಹಾಡಿ ಕೂಡಲೇ ತೆರಳಿದರು.