ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯ ಅಖಂಡ ಜ್ಯೋತಿ, ರಘುಪತಿ ಲಡ್ಡುಗೆ ನಂದಿನಿ ತುಪ್ಪ

Last Updated 19 ಆಗಸ್ಟ್ 2020, 2:15 IST
ಅಕ್ಷರ ಗಾತ್ರ

ಬೆಂಗಳೂರು: ‘ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸ್ಥಳದಲ್ಲಿ ಸ್ಥಾಪಿಸಿರುವ ಅಖಂಡ ಜ್ಯೋತಿಗೆ ನಂದಿನಿ ತುಪ್ಪ ನೀಡಲಾಗುತ್ತಿದೆ’ ಎಂದು ಕೆಎಂಎಫ್‌ (ಕರ್ನಾಟಕ ಹಾಲು ಒಕ್ಕೂಟ) ತಿಳಿಸಿದೆ.

ಪಟ್ನಾದ ಮಹಾವೀರ ಮಂದಿರ ಟ್ರಸ್ಟ್‌ ಮೂಲಕ ತುಪ್ಪ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ಟ್ರಸ್ಟ್‌ನ ದೇವಾಲಯವು ಅಯೋಧ್ಯೆಯ ರಾಮ ಜನ್ಮಭೂಮಿ ಪಕ್ಕದಲ್ಲೇ ಇದ್ದು, ಆ ದೇವಾಲಯದ ಮೂಲಕ ನಂದಿನಿ ತುಪ್ಪದಲ್ಲಿ ರಘುಪತಿ ಲಡ್ಡು ಪ್ರಸಾದ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತಿದೆ. ಈವರೆಗೆ 1.50 ಲಕ್ಷ ಲಡ್ಡು ವಿತರಿಸಲಾಗಿದೆ‘ ಎಂದು ಹೇಳಿದೆ.

‘300 ಟನ್ ಕೆನೆ ರಹಿತ ಹಾಲಿನ ಪುಡಿಯನ್ನು ಬಾಂಗ್ಲಾದೇಶಕ್ಕೆ ನೇರವಾಗಿ ರಫ್ತು ಮಾಡಲಾಗುವುದು’ ಎಂದು ಕೆಎಂಎಫ್ ತಿಳಿಸಿದೆ.

‘ಸ್ವಾತಂತ್ರ್ಯೋತ್ಸವ ಮತ್ತು ಗೌರಿ ಗಣೇಶ ಹಬ್ಬದ ಅಂಗವಾಗಿ ತುಪ್ಪ, ಬೆಣ್ಣೆ ಹಾಗೂ ಇತರ ಉತ್ಪನ್ನಗಳ ಬೆಲೆಯನ್ನು ಸೆಪ್ಟೆಂಬರ್ 15ರವರೆಗೆ ಇಳಿಕೆ ಮಾಡಲಾಗಿದೆ’ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT