ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಸ್.
ಭಾಗವತ್, ‘ಈ ಪ್ರಕರಣದ ಅರ್ಜಿ ದಾರರ ಮನವಿಯನ್ನೇ ಪುನರಾವರ್ತಿ ಸುವಂತಹ ಮತ್ತೊಂದು ರಿಟ್ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ (ಹಣಕಾಸು ಮತ್ತು ಆಡಳಿತ ವಿಭಾಗ) ಎಂ.ಸುನೀತಾ ಸಲ್ಲಿಸಿರುವ ಈ ಅರ್ಜಿಯಲ್ಲಿ (5056/2022) ಯಥಾಸ್ಥಿತಿ ಕಾಯ್ದುಕೊಂಡು ಹೋಗು ವಂತೆ ನ್ಯಾಯಪೀಠರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ, ಈ ಪ್ರಕರಣದಲ್ಲೂ ಅದೇ ಆದೇಶವನ್ನು ಪರಿಗಣಿ ಸಬೇಕು’ ಎಂದು ಕೋರಿದರು.