‘ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1964ರ ಕಲಂ 94 ಎ(1)ಕ್ಕೆ ತಿದ್ದುಪಡಿ ಮಾಡಿ 2018ರ ಮಾರ್ಚ್ 17ರಿಂದ ಒಂದು ವರ್ಷದವರೆಗೆ, ಅಂದರೆ 2019 ಮಾರ್ಚ್ 16 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಚುನಾವಣಾ ಆಯೋಗ 2019ರ ಮಾರ್ಚ್10ರಂದು ಚುನಾವಣೆ ಘೋಷಿಸಿದ್ದರಿಂದ, ನೀತಿ ಸಂಹಿತೆ ನೆಪವಾಗಿಟ್ಟು ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಯ್ದೆಯಲ್ಲಿರುವ ಅಂಶ ನೀತಿಸಂಹಿತೆಗೆ ಬಾಧಕ ಆಗುವುದಿಲ್ಲ’ ಎಂದು ಪ್ರತಾಪಚಂದ್ರ ಶೆಟ್ಟಿ ವಿವರಿಸಿದರು.