ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲರು ಪ್ರಸಕ್ತ 2021ರ ಸಾಲಿನ ಕಲ್ಯಾಣ ನಿಧಿ ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿರುತ್ತದೆ.
ಈ ಕುರಿತಂತೆ ಪರಿಷತ್ ಅಧ್ಯಕ್ಷ ಎಲ್.ಶ್ರೀನಿವಾಸಬಾಬು ಸುತ್ತೋಲೆ ಹೊರಡಿಸಿದ್ದು, ‘ದಂಡರಹಿತವಾಗಿ ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿರುತ್ತದೆ. ನಂತರ ಪ್ರತಿ ತಿಂಗಳೂ ₹ 100 ದಂಡದಂತೆ 2022ರ ಜೂನ್ ಅಂತ್ಯದವರೆಗೂ ಭರ್ತಿ ಮಾಡಬಹುದು’ ಎಂದು ತಿಳಿಸಿದ್ದಾರೆ.
15 ವರ್ಷಕ್ಕೂ ಹೆಚ್ಚಿನ ವೃತ್ತಿನಿರತ ವಕೀಲರು ₹ 2 ಸಾವಿರ ಮತ್ತು 15 ವರ್ಷಕ್ಕಿಂತಲೂ ಕಡಿಮೆ ವೃತ್ತಿ ನಡೆಸಿರುವ ವಕೀಲರು ಒಂದು ಸಾವಿರ ಪಾವತಿಸಬೇಕು. ಆನ್ಲೈನ್ಲ್ಲಿಯೂ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು ಹೆಚ್ಚಿನ ವಿವರಗಳಿಗೆ https://ksbc.org.in ವೆಬ್ಸೈಟ್ ಸಂಪರ್ಕಿಸಬಹುದಾಗಿದೆ.