ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಪರಿಷತ್‌ ಕಲ್ಯಾಣ ನಿಧಿ ಪಾವತಿಗೆ ಗಡುವು

Last Updated 25 ನವೆಂಬರ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲರು ಪ್ರಸಕ್ತ 2021ರ ಸಾಲಿನ ಕಲ್ಯಾಣ ನಿಧಿ ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿರುತ್ತದೆ.

ಈ ಕುರಿತಂತೆ ಪರಿಷತ್ ಅಧ್ಯಕ್ಷ ಎಲ್‌.ಶ್ರೀನಿವಾಸಬಾಬು ಸುತ್ತೋಲೆ ಹೊರಡಿಸಿದ್ದು, ‘ದಂಡರಹಿತವಾಗಿ ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿರುತ್ತದೆ. ನಂತರ ಪ್ರತಿ ತಿಂಗಳೂ ₹ 100 ದಂಡದಂತೆ 2022ರ ಜೂನ್‌ ಅಂತ್ಯದವರೆಗೂ ಭರ್ತಿ ಮಾಡಬಹುದು’ ಎಂದು ತಿಳಿಸಿದ್ದಾರೆ.

15 ವರ್ಷಕ್ಕೂ ಹೆಚ್ಚಿನ ವೃತ್ತಿನಿರತ ವಕೀಲರು ₹ 2 ಸಾವಿರ ಮತ್ತು 15 ವರ್ಷಕ್ಕಿಂತಲೂ ಕಡಿಮೆ ವೃತ್ತಿ ನಡೆಸಿರುವ ವಕೀಲರು ಒಂದು ಸಾವಿರ ಪಾವತಿಸಬೇಕು. ಆನ್‌ಲೈನ್‌ಲ್ಲಿಯೂ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು ಹೆಚ್ಚಿನ ವಿವರಗಳಿಗೆ https://ksbc.org.in ವೆಬ್‌ಸೈಟ್‌ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT