<p><strong>ಶಿವಮೊಗ್ಗ</strong>: ‘ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಏನೆಂದು ಅರ್ಥ ಆಗಬೇಕಾದರೆ ಅವರು ಒಮ್ಮೆ ಆರ್ಎಸ್ಎಸ್ ಶಾಖೆಗೆ ಬರಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಹ್ವಾನ ನೀಡಿದರು.</p>.<p>ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಡಗೇವಾರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರುವುದು ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ. ಇದನ್ನು ತೆಗೆದುಕೊಡುತ್ತೇನೆ. ಅವರು ಒಮ್ಮೆ ನೋಡಲಿ’ ಎಂದು ಹೇಳಿದರು.</p>.<p>‘ಯಾರೋ ಕುಡುಕರು ಹೇಳಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ಹೆಡಗೇವಾರ್ ಕೂಡ ಕಾಂಗ್ರೆಸ್ನಲ್ಲಿದ್ದರು. ಇದು ಸಿದ್ದರಾಮಯ್ಯಗೆ ಗೊತ್ತಾ? ಆರ್ಎಸ್ಎಸ್ ಪದಾಧಿಕಾರಿಗಳಲ್ಲಿ ಹಿಂದುಳಿದವರು, ದಲಿತರು ಇಲ್ಲ. ಇಲ್ಲಿರುವವರೆಲ್ಲರೂ ಹಿಂದೂಗಳೇ’ ಎಂದು ತಿರುಗೇಟು ನೀಡಿದರು.</p>.<p>‘ಕಾಂಗ್ರೆಸ್ಗೆ ಸಮಾಜದಲ್ಲಿ ಬೆಂಬಲ ಸಿಗದ ಕಾರಣ ಆರ್ಯ, ದ್ರಾವಿಡ, ಆರ್ಎಸ್ಎಸ್, ನಪುಂಸಕ ಎಂಬ ಪದವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಳಕೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.</p>.<p>‘ಕುವೆಂಪು ಅವರ ನಾಡಗೀತೆಗೆ ಯಾರೂ ಅಪಮಾನ ಮಾಡಬಾರದು. ಅಪಮಾನವಾಗಿದೆ ಎಂಬ ಭಾವನೆಯನ್ನು ಕಾಂಗ್ರೆಸ್ಸಿಗರು ಸೃಷ್ಟಿಸಿದ್ದಾರೆ. ಒಂದು ವೇಳೆ ಅಪಮಾನ ಮಾಡಿದ್ದು ನಿಜವಾದರೆ ಸಂಬಂಧಪಟ್ಟವರ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸುತ್ತಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ‘ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಏನೆಂದು ಅರ್ಥ ಆಗಬೇಕಾದರೆ ಅವರು ಒಮ್ಮೆ ಆರ್ಎಸ್ಎಸ್ ಶಾಖೆಗೆ ಬರಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಹ್ವಾನ ನೀಡಿದರು.</p>.<p>ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಡಗೇವಾರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರುವುದು ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ. ಇದನ್ನು ತೆಗೆದುಕೊಡುತ್ತೇನೆ. ಅವರು ಒಮ್ಮೆ ನೋಡಲಿ’ ಎಂದು ಹೇಳಿದರು.</p>.<p>‘ಯಾರೋ ಕುಡುಕರು ಹೇಳಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ಹೆಡಗೇವಾರ್ ಕೂಡ ಕಾಂಗ್ರೆಸ್ನಲ್ಲಿದ್ದರು. ಇದು ಸಿದ್ದರಾಮಯ್ಯಗೆ ಗೊತ್ತಾ? ಆರ್ಎಸ್ಎಸ್ ಪದಾಧಿಕಾರಿಗಳಲ್ಲಿ ಹಿಂದುಳಿದವರು, ದಲಿತರು ಇಲ್ಲ. ಇಲ್ಲಿರುವವರೆಲ್ಲರೂ ಹಿಂದೂಗಳೇ’ ಎಂದು ತಿರುಗೇಟು ನೀಡಿದರು.</p>.<p>‘ಕಾಂಗ್ರೆಸ್ಗೆ ಸಮಾಜದಲ್ಲಿ ಬೆಂಬಲ ಸಿಗದ ಕಾರಣ ಆರ್ಯ, ದ್ರಾವಿಡ, ಆರ್ಎಸ್ಎಸ್, ನಪುಂಸಕ ಎಂಬ ಪದವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಳಕೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.</p>.<p>‘ಕುವೆಂಪು ಅವರ ನಾಡಗೀತೆಗೆ ಯಾರೂ ಅಪಮಾನ ಮಾಡಬಾರದು. ಅಪಮಾನವಾಗಿದೆ ಎಂಬ ಭಾವನೆಯನ್ನು ಕಾಂಗ್ರೆಸ್ಸಿಗರು ಸೃಷ್ಟಿಸಿದ್ದಾರೆ. ಒಂದು ವೇಳೆ ಅಪಮಾನ ಮಾಡಿದ್ದು ನಿಜವಾದರೆ ಸಂಬಂಧಪಟ್ಟವರ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸುತ್ತಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>