ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಬುಧವಾರ ಕುಟುಂಬ ಸಮೇತ ಮನೆ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ‘ಕುಮಾರಸ್ವಾಮಿ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರೇ ನೀರಾವರಿ ಸಚಿವರಾಗಿದ್ದರು. ಆಗ ಮಾಡಿದ್ದರೆ ಬಹುಶಃ ನಮಗೇನಾದ್ರೂ ಕೀರ್ತಿ ಬರುತ್ತೆ ಅಂತಾ ಈ ಬಗ್ಗೆ ಯೋಚನೆ ಮಾಡಲಿಲ್ಲವೇ? ನಾನೂ ಹಲವು ಪಾದಯಾತ್ರೆ ಮಾಡಿದ್ದೇನೆ. ರಾಜ್ಯದಲ್ಲಿ ಕೃಷ್ಣ, ಮಹಾದಾಯಿ ಇಲ್ಲವೇ? ಕೇವಲ ಮೇಕೆದಾಟು ವಿಚಾರವೇ ಕಾಂಗ್ರೆಸ್ಗೆ ಯಾಕೆ ಮುಖ್ಯ’ ಎಂದು ಪ್ರಶ್ನಿಸಿದರು.