ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭಾನುವಾರ 'ನವ ಭಾರತದಲ್ಲಿ ಮಾಧ್ಯಮಗಳ ಪಾತ್ರ' ಕುರಿತು ಮಾತನಾಡಿದ ಅವರು, 'ಸುದ್ದಿ ಸಂಪೂರ್ಣವಾಗಿ ವೈಯಕ್ತಿಕ ಅಭಿಪ್ರಾಯಗಳಿಂದ ಮುಕ್ತವಾಗಿ ಇರಬೇಕು. ಅಭಿಪ್ರಾಯಗಳು ಅಂಕಣ ಮತ್ತು ಸಂಪಾದಕೀಯಕ್ಕೆ ಸೀಮಿತವಾಗಿರಲಿ. ಸುದ್ದಿಯಲ್ಲಿ ಪತ್ರಕರ್ತರ ಅಭಿಪ್ರಾಯ ಹೇರುವುದು ಜನರನ್ನು ಗೊಂದಲಕ್ಕೆ ತಳ್ಳಲು ಕಾರಣವಾಗುತ್ತದೆ' ಎಂದರು.