ದಾವಣಗೆರೆ: ಬೆಂಗಳೂರಿನ ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಿಸಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದು ಮೃತಪಟ್ಟಿದ್ದ ಸಾಫ್ಟ್ವೇರ್ ಎಂಜಿನಿಯರ್ ಲೋಹಿತ್ ಕುಮಾರ್ ಸುಲಾಖೆ ಅವರ ಪತ್ನಿ ತೇಜಸ್ವಿನಿ ಮತ್ತು ಪುತ್ರ ವಿಹಾನ್ ಅವರ ಅಂತ್ಯಕ್ರಿಯೆ ನಗರದಲ್ಲಿ ಬುಧವಾರ ನೆರವೇರಿತು.
ತೇಜಸ್ವಿನಿ ಅಂತ್ಯಕ್ರಿಯೆ ಇಲ್ಲಿನ ವೈಕುಂಠ ಧಾಮದಲ್ಲಿ ಹಾಗೂ ವಿಹಾನ್ ಅಂತಿಮ ಸಂಸ್ಕಾರ ಇಲ್ಲಿನ ಶಾಮನೂರು ರಸ್ತೆಯಲ್ಲಿನ ರುದ್ರಭೂಮಿಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವಿಧಿ ವಿಧಾನದಂತೆ ಪ್ರತ್ಯೇಕವಾಗಿ ನಡೆಯಿತು.
ಮೃತ ದೇಹಗಳನ್ನು ಬೆಳಗಿನ ಜಾವ ದಾವಣಗೆರೆಯ ಬಸವೇಶ್ವರ ನಗರದಲ್ಲಿನ ಮನೆಗೆ ತರಲಾಯಿತು. ಅಂತ್ಯ ಸಂಸ್ಕಾರದ ವೇಳೆ ಕುಟುಂಬದವರಆಕ್ರಂದನ ಮುಗಿಲು ಮುಟ್ಟಿತ್ತು.