ರಾಜ್ಯದ ಜನರ ಕುಂದು ಕೊರತೆಗಳ ನಿವಾರಣೆಗೆ ಬೆಳಕು ಚೆಲ್ಲುವ ವೇದಿಕೆಯಾಗಬೇಕಿದ್ದ, ಸದನವನ್ನು ರಾಜಕೀಯ ಅಂಗಳವನ್ನಾಗಿ ಮಾಡಿಕೊಂಡಿರುವುದು ದುರಂತ. ಹಿಜಾಬ್ ವಿಷಯವನ್ನು ಕೆಲವು ಮತೀಯ ಸಂಘಟನೆಗಳು ಸಮಾಜ ಒಡೆಯುವ ಅಸ್ತ್ರವನ್ನಾಗಿ ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಇದರ ಹಿಂದಿರುವ ಷಡ್ಯಂತ್ರವನ್ನು ಪೊಲೀಸರು ಬಯಲು ಮಾಡುತ್ತಾರೆ ಮತ್ತು ಅವರಿಗೆ ತಕ್ಕ ಕಾನೂನು ಕ್ರಮ ಆಗುತ್ತದೆ ಎಂದು ಹೇಳಿದರು.