ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿನ ಎಸಿಬಿ ಕೇಂದ್ರ ಕಚೇರಿಗೆ ಶನಿವಾರ ಬೆಳಿಗ್ಗೆ ಹಾಜರಾದ ಜಮೀರ್, ಕೆಲವು ಗಂಟೆಗಳ ಕಾಲ ತನಿಖಾ ತಂಡದ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಶಾಸಕರು ನಿರ್ಮಿಸಿರುವ ಬೃಹತ್ ಬಂಗಲೆಗೆ ಸಂಬಂಧಿಸಿದಂತೆಯೇ ತನಿಖಾ ತಂಡ ಹಲವು ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.