<p><strong>ಬೆಂಗಳೂರು</strong>: ‘ಸಮರ್ಥ ನಾಯಕತ್ವ,ಮಾನವೀಯ ಆಡಳಿತ, ಮೌಲ್ಯಯುತ ರಾಜಕಾರಣ ಮತ್ತುದೂರದೃಷ್ಟಿವುಳ್ಳ ಜನನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಲ್ಲೇ ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದರು.</p>.<p>ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜನಸಂಖ್ಯೆಯೇ ಭಾರತಕ್ಕೆ ಶಾಪ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಮೋದಿ ಅವರು ವರವಾಗಿ ಪರಿಣಮಿಸಿದರು. ಶೇ 46 ರಷ್ಟು ಯುವಜನತೆಯನ್ನು ದೇಶದ ಶಕ್ತಿ ಎಂದು ಪರಿಗಣಿಸಿ ಅಭಿವೃದ್ಧಿಯಲ್ಲಿ<br />ತೊಡಗಿಸಿಕೊಂಡರು’ ಎಂದು ವಿವರಿಸಿದರು.</p>.<p>‘ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿ ಅವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಮೋದಿ ಅವರ ಕುರಿತಾದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದಾದ್ಯಂತ ವಿತರಿಸಲಾಗುವುದು’ ಎಂದರು. ನಾಯಕತ್ವ ಪ್ರಮುಖವಾಗುತ್ತದೆ ಎನ್ನುವುದು ಜನರಿಗೆಗೊತ್ತಾಗಿದೆ ಎಂದು ಕೇಂದ್ರ ಸಚಿವ ಲೋಗನಾಥನ್ ಮುರುಗನ್ ತಿಳಿಸಿದರು.</p>.<p><strong>ಭಾರತ ಬದಲಾಗಿದೆ: ಸುಧಾಮೂರ್ತಿ</strong></p>.<p>‘ಭಾರತ ದೇಶ ಹೇಗೆ ಬದಲಾಗಿದೆ ಎನ್ನುವ ಕುರಿತು ಈ ಕೃತಿಯಲ್ಲಿ ನಾನು ಒಂದು ಅಧ್ಯಾಯ ಬರೆದಿರುವೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದಸುಧಾ ಮೂರ್ತಿ ತಿಳಿಸಿದರು.</p>.<p>‘ಮೋದಿ ಅವರ ಜತೆ ನಾನು ಕೆಲಸ ಮಾಡಿಲ್ಲ. ಅವರ ನಿಕಟ ಸಂಪರ್ಕದಲ್ಲಿಯೂ ಇಲ್ಲ. ಆದರೆ, 20 ವರ್ಷಗಳಲ್ಲಿ ಮಹಿಳೆ ಹೇಗೆ ಬದಲಾಗಿದ್ದಾಳೆ. ಇದಕ್ಕೆ ಕಾರಣಗಳೇನು ಎನ್ನುವುದನ್ನು ವಿಶ್ಲೇಷಿಸುವ ಲೇಖನ ಇದಾಗಿದೆ.ಗ್ರಾಮೀಣ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ನೋಡಿ ಲೇಖನ ಬರೆದಿದ್ದೇನೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಮರ್ಥ ನಾಯಕತ್ವ,ಮಾನವೀಯ ಆಡಳಿತ, ಮೌಲ್ಯಯುತ ರಾಜಕಾರಣ ಮತ್ತುದೂರದೃಷ್ಟಿವುಳ್ಳ ಜನನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಲ್ಲೇ ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದರು.</p>.<p>ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜನಸಂಖ್ಯೆಯೇ ಭಾರತಕ್ಕೆ ಶಾಪ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಮೋದಿ ಅವರು ವರವಾಗಿ ಪರಿಣಮಿಸಿದರು. ಶೇ 46 ರಷ್ಟು ಯುವಜನತೆಯನ್ನು ದೇಶದ ಶಕ್ತಿ ಎಂದು ಪರಿಗಣಿಸಿ ಅಭಿವೃದ್ಧಿಯಲ್ಲಿ<br />ತೊಡಗಿಸಿಕೊಂಡರು’ ಎಂದು ವಿವರಿಸಿದರು.</p>.<p>‘ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿ ಅವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಮೋದಿ ಅವರ ಕುರಿತಾದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದಾದ್ಯಂತ ವಿತರಿಸಲಾಗುವುದು’ ಎಂದರು. ನಾಯಕತ್ವ ಪ್ರಮುಖವಾಗುತ್ತದೆ ಎನ್ನುವುದು ಜನರಿಗೆಗೊತ್ತಾಗಿದೆ ಎಂದು ಕೇಂದ್ರ ಸಚಿವ ಲೋಗನಾಥನ್ ಮುರುಗನ್ ತಿಳಿಸಿದರು.</p>.<p><strong>ಭಾರತ ಬದಲಾಗಿದೆ: ಸುಧಾಮೂರ್ತಿ</strong></p>.<p>‘ಭಾರತ ದೇಶ ಹೇಗೆ ಬದಲಾಗಿದೆ ಎನ್ನುವ ಕುರಿತು ಈ ಕೃತಿಯಲ್ಲಿ ನಾನು ಒಂದು ಅಧ್ಯಾಯ ಬರೆದಿರುವೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದಸುಧಾ ಮೂರ್ತಿ ತಿಳಿಸಿದರು.</p>.<p>‘ಮೋದಿ ಅವರ ಜತೆ ನಾನು ಕೆಲಸ ಮಾಡಿಲ್ಲ. ಅವರ ನಿಕಟ ಸಂಪರ್ಕದಲ್ಲಿಯೂ ಇಲ್ಲ. ಆದರೆ, 20 ವರ್ಷಗಳಲ್ಲಿ ಮಹಿಳೆ ಹೇಗೆ ಬದಲಾಗಿದ್ದಾಳೆ. ಇದಕ್ಕೆ ಕಾರಣಗಳೇನು ಎನ್ನುವುದನ್ನು ವಿಶ್ಲೇಷಿಸುವ ಲೇಖನ ಇದಾಗಿದೆ.ಗ್ರಾಮೀಣ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ನೋಡಿ ಲೇಖನ ಬರೆದಿದ್ದೇನೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>