ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ‘ಮುದ್ರಣ ರತ್ನ’ ಪ್ರಶಸ್ತಿಯು ಲಕ್ಷ್ಮೀ ಮುದ್ರಣಾಲಯದ ಬಿ.ಆರ್.ಅಶೋಕ್ ಕುಮಾರ್ ಅವರಿಗೆ ಲಭಿಸಿದೆ.
ಕರ್ನಾಟಕ ಮುದ್ರಣಕಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಶೋಕ್ ಅವರು ಹಲವು ಮೇರು ಕೃತಿಗಳನ್ನು ಮುದ್ರಿಸಿದ್ದರು.