‘ಅಸಮಾನತೆ, ಮೂಢನಂಬಿಕೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ಬಸವಣ್ಣ ಹೋರಾಡಿದ್ದರು. ಆ ಪದ್ಧತಿಗಳು ಇಂದಿಗೂ ಇವೆ. ಎಲ್ಲರಿಗೂ ಸಮಾನತೆ ದೊರೆತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಸಂಪತ್ತಿನ ಹಂಚಿಕೆಯಾಗಿಲ್ಲ. ಬಸವಣ್ಣ ಈಗಲೂ ಪ್ರಸ್ತುತವಾಗಬೇಕಾದ ಪರಿಸ್ಥಿತಿ ಬರಬೇಕಾಗಿತ್ತಾ’ ಎಂದು ಅವರು ಪ್ರಶ್ನಿಸಿದರು.