‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ಹೆರಾಲ್ಡ್’ ಪತ್ರಿಕೆಗಳಿಗೆ ನಿಯಮಿತವಾಗಿ ಕಲಾ ವಿಮರ್ಶೆ ಬರೆದಿದ್ದರು. ಬೆಂಗಳೂರು ಗಾಯನ ಸಮಾಜದ 38ನೇ ಸಂಗೀತ ಗೋಷ್ಠಿಯ ಅಧ್ಯಕ್ಷರಾಗಿದ್ದರು. ‘ಮುರಳಿವಾಣಿ’ ಹಾಗೂ ‘ಗಾನ ಕಲಾ ಮಂಜರಿ’ ಕೃತಿಗಳನ್ನು ಸಂಪಾದಿಸಿ
ದ್ದಾರೆ. ಸಂಗೀತ ಕಲಾರತ್ನ, ಸಂಗೀತ ಕಲಾಭೂಷಣ, ಕರ್ನಾಟಕ ಕಲಾಶ್ರೀ, ಸಾಹಿತ್ಯ ಕಲಾಶ್ರೀ ಪ್ರಶಸ್ತಿಗಳು ಅವರಿಗೆ ಸಂದಿವೆ.