ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ‘ಬಸವನಹಳ್ಳಿ ಪೊಲೀಸರು ₹12,550 ನಗದು ವಶಕ್ಕೆ ಪಡೆದಿದ್ದರು. ನ್ಯಾಯಾಧೀಶರ ಅನುಮತಿ ಪಡೆದ ಬಳಿಕ ಎಫ್ಐಆರ್ ದಾಖಲಿಸಿದ್ದಾರೆ. ಸಿಆರ್ಪಿಸಿ ಸೆಕ್ಷನ್ 155(2) ಪ್ರಕಾರ, ದಾಳಿ ಮತ್ತು ತನಿಖೆ ನಡೆಸುವ ಮೊದಲು ನ್ಯಾಯಾಧೀಶರ ಅನುಮತಿಯನ್ನು ಪೊಲೀಸರು ಪಡೆಯಬೇಕು’ ಎಂದು ಅರ್ಜಿದಾರರು ಹೇಳಿದ್ದಾರೆ.