ಸೆಪ್ಟೆಂಬರ್ 12 ರಂದು ನಿಗದಿಯಾಗಿರುವ ಪ್ರವೇಶ ಪರೀಕ್ಷೆ ಗಮನದಲ್ಲಿಟ್ಟುಕೊಂಡು ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ರವಿ ಹೊಸಮನಿ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಪಟ್ಟಿ ಸಿದ್ಧಪಡಿಸುವಂತೆ ಕಾನೂನು ಶಾಲೆಗೆ ನಿರ್ದೇಶನ ನೀಡಿದೆ. ‘ಈ ಪಟ್ಟಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದೂ ಪೀಠ ಹೇಳಿತು.