ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಕೋಮುವಾದಿಗಳ ಜೊತೆ ಮಂಡ್ಯ-ತುಮಕೂರು ಚುನಾವಣೆಯಲ್ಲಿ ಶಾಮೀಲಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿತು. ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗುವ ಆಸೆ ಇರದಿದ್ದರೂ ಕಾಂಗ್ರೆಸ್ ನವರೇ ಬಂದು ಕೋಮುವಾದಿಗಳನ್ನು ದೂರಿಡಲು ಮುಖ್ಯಮಂತ್ರಿಯಾಗಲು ಕೇಳಿಕೊಂಡಿದ್ದರು. ಮನೆ, ಮನೆಯಲ್ಲಿ ಒಡೆದು ಆಳುವಂತಹ ಕೀಳುಮಟ್ಟದ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು’ ಎಂದು ವಾಗ್ದಾಳಿ ನಡೆಸಿದರು.